Advertisement

ಕೋವಿಡ್ 19ಎಫೆಕ್ಟ್: ಸಚಿವರು, ಶಾಸಕರ ಶೇ.75ರಷ್ಟು ಸಂಬಳ ಕಡಿತ: ತೆಲಂಗಾಣ ಸಿಎಂ ಘೋಷಣೆ

09:15 AM Apr 01, 2020 | Nagendra Trasi |

ನವದೆಹಲಿ:ಮಾರಣಾಂತಿಕ ಕೋವಿಡ್ 19 ವೈರಸ್ ನಿಂದ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸಿಎಂ ಸೇರಿದಂತೆ ಶಾಸಕರು, ಸಚಿವರ ಶೇ.75ರಷ್ಟು ಸಂಬಳವನ್ನು ಕಡಿತಗೊಳಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮಂಗಳವಾರ ಘೋಷಿಸಿದ್ದಾರೆ.

Advertisement

ವಿಧಾನಸಭೆಗೆ ಹಾಗೂ ಸ್ಥಳೀಯ ಸಂಸ್ಥೆಗೆ ಆಯ್ಕೆಯಾದ ಜನಪ್ರತಿನಿಧಿಗಳ ಸಂಬಳವನ್ನು ಶೇ.75ರಷ್ಟು ಕಡಿತಗೊಳಿಸಲಾಗುವುದು. ರಾಜ್ಯ ಸ್ವಾಮಿತ್ವದ ಕಾರ್ಪೋರೇಷನ್ಸ್, ರಸ್ತೆ ಸಾರಿಗೆ ಸಂಸ್ಥೆ, ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಪೋರೇಶನ್ ಕೂಡಾ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಸಿಎಂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next