Advertisement

ತಾಯಿ, ಮಗುವಿಗೆ ಕೋವಿಡ್‌ 19 ಸೋಂಕು

07:11 AM May 26, 2020 | Lakshmi GovindaRaj |

ಬಂಗಾರಪೇಟೆ: ಕೋವಿಡ್‌ 19 ಮತ್ತೆ ತನ್ನ ಅಟ್ಟಹಾಸ ಮುಂದುವರಿಸಿದ್ದು, ಸೋಮವಾರ ಮತ್ತೆ ವಿಜಯ ನಗರ, ಇಂದಿರಾಶ್ರಯ ವಾರ್ಡ್‌ನ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಪುರಸಭೆ ಅಧಿಕಾರಿಗಳು ಎರಡೂ  ವಾರ್ಡ್‌ಗಳನ್ನು ಸೀಲ್‌ಡೌನ್‌ ಮಾಡಿದ್ದಾರೆ. ಚೆನ್ನೈಗೆ ಹಲವು ಬಾರಿ ಓಡಾಟ ನಡೆಸಿದ್ದ ಲಾರಿ ಚಾಲಕನಲ್ಲಿ ಮೂರು ದಿನಗಳ ಹಿಂದೆ ಕೋವಿಡ್‌ 19 ಸೋಂಕು ದೃಢಪಟ್ಟಿತ್ತು.

Advertisement

32 ವರ್ಷದ ಈ ಸೋಂಕಿತ ವ್ಯಕ್ತಿ ಚೆನ್ನೈನಿಂದ ನೇರವಾಗಿ  ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಚಿಂಚಾಂಡ್ಲಹಳ್ಳಿ ಗ್ರಾಮದ ತನ್ನ ಪತ್ನಿ ತವರು ಮನೆಗೆ ಹೋಗಿದ್ದ. ಅಲ್ಲಿಂದ ಮೂರು ದಿನಗಳ ಹಿಂದೆ ಬಂಗಾರಪೇಟೆಯ ಇಂದಿರಾ ಶ್ರಯದಲ್ಲಿ ವಾಸವಾಗಿದ್ದ. ಈತನಲ್ಲಿ  ಕೋವಿಡ್‌ 19 ದೃಢ ಪಟ್ಟಿದ್ದ ಬೆನ್ನಲ್ಲೆ, 27 ವರ್ಷದ ಈತನ ಪತ್ನಿ ಹಾಗೂ 6 ವರ್ಷದ ಹೆಣ್ಣು ಮಗಳಿಗೂ ಕೋವಿಡ್‌ 19 ಅಂಟಿಕೊಂಡಿದೆ.

ಪಟ್ಟಣದಲ್ಲಿ ಒಟ್ಟು ಆರು ಕೋವಿಡ್‌ 19 ಪ್ರಕರಣಗಳು ಇರುವುದರಿಂದ ತಾಲೂಕು ಆಡಳಿತ,  ಪುರಸಭೆ, ಅರೋಗ್ಯ ಇಲಾಖೆಯು ಸೋಂಕಿತರು ವಾಸವಿದ್ದಪ್ರದೇಶಗಳನ್ನು ಸೀಲ್‌ಡೌನ್‌ ಮಾಡಿ, ನಿಷೇಧಾಜ್ಞೆ ಜಾರಿ ಮಾಡಿದೆ. ಜನರು ಮನೆಯಿಂದ ಹೊರಬರಲು ಸಾಧ್ಯವಿಲ್ಲದ ಕಾರಣ, ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಅಗತ್ಯ  ಸೌಲಭ್ಯಗಳನ್ನು ಮನೆಗಳಿಗೆ ಒದಗಿಸು ತ್ತಿದ್ದಾರೆ.

ಈ ಎರಡು ಸೀಲ್‌ಡೌನ್‌ ಪ್ರದೇಶಗಳಿಗೆ ತಹ ಶೀಲ್ದಾರ್‌ ಕೆ.ಬಿ.ಚಂದ್ರಮೌಳೇಶ್ವರ್‌, ತಾಲೂಕು ಆರೋ ಗ್ಯಾಧಿಕಾರಿ ಡಾ.ವಿಜಯಕುಮಾರಿ, ಸಬ್‌ ಇನ್ಸ್‌ ಪೆಕ್ಟರ್‌ ಆರ್‌.ಜಗದೀಶರೆಡ್ಡಿ, ಪುರಸಭೆ  ಮುಖ್ಯಾಧಿಕಾರಿ ವಿ. ಶ್ರೀಧರ್‌, ಆರೋಗ್ಯಾಧಿಕಾರಿ ಗೋವಿಂದರಾಜ್‌, ಸಿ ಎಒ ವೆಂಕಟೇಶ್‌, ಕಂದಾಯ ನಿರೀಕ್ಷಕ ಕಾಂತರಾಜ್‌, ಸಿಬ್ಬಂದಿಯಾದ ಸೋಮಣ್ಣ, ಸಂತೋಷ್‌, ಬಾಬು, ಹರೀಶ್‌, ಮಂಜುನಾಥ್‌ ಮುಂತಾದವರು ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next