Advertisement

ವಾಯುವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರಿಗೆ ಕೋವಿಡ್ 19 ಸೊಂಕು

11:58 PM Aug 18, 2020 | Hari Prasad |

ಮುಂಡಗೋಡ: ವಾಯುವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಗೆ ಕೋವಿಡ್ 19 ಸೋಂಕು ತಗುಲಿರುವುದು ಮಂಗಳವಾರ  ದೃಢಪಟ್ಟಿದೆ.

Advertisement

ಇತ್ತೀಚೆಗೆ ಪಾಟೀಲರ ಪುತ್ರ ಬಾಪುಗೌಡನಿಗೆ ಕೋವಿಡ್ 19 ಸೋಂಕು ತಗುಲಿತ್ತು.

ಈ ವೇಳೆ ರಾಪಿಡ್ ತಪಾಸಣೆ ನಡೆಸಿದಾಗ ಕೋವಿಡ್ ನೆಗೆಟಿವ್ ಬಂದಿತ್ತು.

ಅಂದು ಗಂಟಲಿನ ದ್ರವ ಮಾದರಿ ತೆಗೆದು ಕೋವಿಡ್ ತಪಾಸಣೆಗೆ ಕಾರವಾರಕ್ಕೆ ಕಳುಹಿಸಲಾಗಿತ್ತು ಇಂದು ಬಂದ ವರದಿಯಲ್ಲಿ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಎಚ್.ಎಫ್.ಇಂಗಳೆ ತಿಳಿಸಿದ್ದಾರೆ.

ನನಗೆ ಕೋವಿಡ್ 19 ಸೋಂಕು ದೃಢ ಪಟ್ಟಿದೆ ಎಂದು ವೈದ್ಯರು ತಿಳಿಸಿದ್ದು ನನ್ನ ಸಂಪರ್ಕದಲ್ಲಿ   ಬಂದವರೆಲ್ಲರು ಕೋವಿಡ್ 19 ತಪಾಸಣೆ ಮಾಡಿಸಿಕೊಂಡು ಹೋಂ ಕ್ವಾರಂಟೈನ್ ಆಗುವಂತೆ ವಿ. ಎಸ್. ಪಾಟೀಲರು ತಿಳಿಸಿದ್ದಾರೆ.

Advertisement

ಸಚಿವ ಶಿವರಾಮ ಹೆಬ್ಬಾರ ಅವರು ಇಂದು ಮುಂಡಗೋಡನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು ಈ ವೇಳೆ ವಿ.ಎಸ್. ಪಾಟೀಲರು ಸೇರಿದಂತೆ ತಾಲೂಕಿನ ಬಹುತೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next