Advertisement

ಕೋವಿಡ್ ಸುಳ್ಳು ಸುದ್ದಿಗಳು: ಹೊಸ ಸಂವಹನ ನಿಯಮ ಜಾರಿಯಾಗಿಲ್ಲ

01:44 AM Apr 09, 2020 | Hari Prasad |

ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವಷ್ಟೇ ವೇಗದಲ್ಲಿ ಅದರ ಕುರಿತಾದ ಸುಳ್ಳು ಸುದ್ದಿಗಳೂ ವ್ಯಾಪಿಸುತ್ತಿವೆ. ಸಾಮಾಜಿಕ ಜಾಲತಾಣಗಳ‌ಲ್ಲಿ ಹಬ್ಬುತ್ತಿರುವ ಸುದ್ದಿಗಳ ಸತ್ಯ ದರ್ಶನ ಇಲ್ಲಿರುತ್ತದೆ.

Advertisement

ಹೊಸ ಸಂವಹನ ನಿಯಮ ಜಾರಿಯಾಗಿಲ್ಲ
ಭಾರತದಲ್ಲಿ ಹೊಸ ಸಂವಹನ ನಿಯಮಗಳು ಜಾರಿಗೆ ಬಂದಿವೆ. ಎಲ್ಲಾ ಕರೆಗಳನ್ನು ದಾಖಲಿಸಲಾಗಿದೆ, ಎಲ್ಲಾ ಫೋನ್‌ ಕರೆ ರೆಕಾರ್ಡಿಂಗ್‌ ಗಳನ್ನೂ ಉಳಿಸಲಾಗಿದೆ, ವಾಟ್ಸ್ ಆ್ಯಪ್, ಟ್ವಿಟರ್, ಫೇಸ್‌ ಬುಕ್‌ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ… ಎಂಬಂಥ ಇಷ್ಟುದ್ದದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ.

ಜತೆಗೆ, ರಾಜಕೀಯ ಹಾಗೂ ಧಾರ್ಮಿಕ ಅಂಶಗಳನ್ನು ಹೊಂದಿರುವ ಎಲ್ಲ ಸಂದೇಶಗಳನ್ನೂ ಟ್ರ್ಯಾಕ್‌ ಮಾಡಲಾಗುತ್ತಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ಈ ಸಂದೇಶದಲ್ಲಿ ರವಾನಿಸಲಾಗಿದೆ.

ಆದರೆ, ಭಾರತ ಸರಕಾರ ಅಂಥ ಯಾವುದೇ ಸಂವಹನ ನಿಯಮ ಜಾರಿ ಮಾಡಿಲ್ಲ ಎಂದು ಸ್ವತಃ ಪ್ರಸ್‌ ಇನ್ ಫಾರ್ಮೇಷನ್‌ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ. ಯಾರೋ ಇಂಥದ್ದೊಂದು ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಹರಿಬಿಟ್ಟಿದ್ದು, ಸೋಮವಾರದಿಂದೀಚೆಗೆ ಎಲ್ಲರ ವಾಟ್ಸ್ ಆ್ಯಪ್‌ ಗಳಿಗೂ ಈ ಸಂದೇಶ ಬರಲಾರಂಭಿಸಿದೆ.

ವಾಟ್ಸ್‌ಆ್ಯಪ್‌ ಅಡ್ಮಿನ್‌ ವಿರುದ್ಧ ಕ್ರಮ ಸುಳ್ಳು
ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಎಲ್ಲ ವಾಟ್ಸ್‌ಆ್ಯಪ್‌ ಅಡ್ಮಿನ್‌ಗಳೂ 2 ದಿನಗಳ ಕಾಲ ಗ್ರೂಪ್‌ಗಳನ್ನು ನಿಷ್ಕ್ರಿಯಗೊಳಿಸಬೇಕು. ಕೋವಿಡ್ ಕುರಿತಾದ ಜೋಕುಗಳು ಹರಿದಾಡುತ್ತಿರುವ ಕಾರಣ ಅಡ್ಮಿನ್‌ ಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೊಂದು ನಿಮ್ಮ ಮೊಬೈಲ್‌ ಗೂ ಬಂದಿರಬಹುದು.

Advertisement

ಅಲ್ಲದೆ, ಇಂದು ರಾತ್ರಿಯಿಂದಲೇ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಯಾಗಲಿದ್ದು, ಯಾರು ಕೂಡ ಕೋವಿಡ್ ಗೆ ಸಂಬಂಧಿಸಿದ ಸಂದೇಶಗಳನ್ನು ಫಾರ್ವರ್ಡ್‌ ಮಾಡುವಂತಿಲ್ಲ ಎಂಬ ಮಾಹಿತಿಯೂ ಇದ್ದು, ಈ ಸಂದೇಶ ನಂಬಿ ನೀವೂ ಅನೇಕ ಗ್ರೂಪ್‌ ಗಳಿಗೆ ಇದನ್ನು ಫಾರ್ವರ್ಡ್‌ ಮಾಡಿರಬಹುದು. ಆದರೆ ಇದೊಂದು ಸುಳ್ಳು ಸುದ್ದಿ.

ಅಡ್ಮಿನ್‌ ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರಕಾರ ಎಲ್ಲೂ ಹೇಳಿಲ್ಲ. ಮಾ.24ರಂದು ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕೋವಿಡ್ ವಿರುದ್ಧದ ಹೋರಾಟಕ್ಕೆ ಹಣಕಾಸು ನೆರವು ಕುರಿತು ಸರಕಾರ ಪ್ರಸ್ತಾಪಿಸಿತ್ತೇ ವಿನಾ, ಅದಕ್ಕೂ  ವಾಟ್ಸ್‌ ಆ್ಯಪ್‌ ಸಂದೇಶಗಳಿಗೂ ಸಂಬಂಧವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next