Advertisement

TN: ಸನಾತನ ಧರ್ಮ ಟೀಕಿಸಿದ್ದ ಸ್ಟಾಲಿನ್‌ ಪುತ್ರ ಉದಯನಿಧಿಗೆ ಕೋರ್ಟ್‌ ಸಮನ್ಸ್‌

09:47 PM Feb 02, 2024 | Team Udayavani |

ಬೆಂಗಳೂರು: ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪುತ್ರ ಸಚಿವ ಉದಯನಿಧಿ ಸ್ಟಾಲಿನ್‌ ಅವರಿಗೆ ಮಾ. 4ರಂದು ತಮ್ಮ ಮುಂದೆ ಖುದ್ದು ಹಾಜಗಾಗುವಂತೆ ಬೆಂಗಳೂರಿನ 42 ಎಂಸಿಎಂಎಂ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದೆ.

Advertisement

ಬೆಂಗಳೂರಿನ ಪರಮೇಶ್‌ ಅವರು ಉದಯನಿಧಿ ಸ್ಟಾಲಿನ್‌ ಹೇಳಿಕೆ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ 42 ಎಂಸಿಎಂಎಂ ನ್ಯಾಯಾಲಯ ಖುದ್ದು ಹಾಜರಿಗೆ ಸಮನ್ಸ್‌ ಜಾರಿಗೊಳಿಸಿದೆ. ಹಾಗೆಯೇ ಕಾರ್ಯಕ್ರಮ ಸಂಘಟಿಸಿದ್ದ ವೆಂಕಟೇಶ್‌ ಎಸ್‌., ಮಧುಕರ್‌ ರಾಮಲಿಂಗಂ, ಅದವನ್‌ ಡಿಚನ್ಯ ಅವರಿಗೂ ನ್ಯಾಯಾಲಯ ಸಮನ್ಸ್‌ ನೀಡಿದೆ.

ಪರಮೇಶ್‌ ತಮ್ಮ ದೂರಿನಲ್ಲಿ 2023ರ ಸೆಪ್ಟೆಂಬರ್‌ 3ರಂದು ಚೆನ್ನೈಯ ತೆನಂ ಪೇಟೆಯಲ್ಲಿ ನಡೆದ ಸನಾತನ ಧರ್ಮ ನಿರ್ಮೂಲನ ಸಮಾವೇಶದಲ್ಲಿ ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂದು ಭಾಷಣ ಮಾಡಿರುವುದನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದೇನೆ . ಈ ಹೇಳಿಕೆಯು ಸಮಾಜದಲ್ಲಿ ಅಶಾಂತಿ, ದಂಗೆ ಎಬ್ಬಿಸಲು ಪ್ರಚೋದನೆ ನೀಡುವಂತಿದೆ. ಈ ಹೇಳಿಕೆಯನ್ನು ಓದಿದ ಅನ್ಯ ಧರ್ಮಿಯರು ನನ್ನ ಧರ್ಮದ ಬಗ್ಗೆ ಕ್ಲುಲ್ಲಕವಾಗಿ ಮಾತನಾಡಿದ್ದಾರೆ. ಇದರಿಂದ ನನ್ನ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next