Advertisement

ಸಾವಿನಲ್ಲೂ ಒಂದಾದ ದಂಪತಿ

12:50 AM Jan 19, 2019 | Team Udayavani |

ದಾವಣಗೆರೆ: ಪತಿಯ ಸಾವಿನ ಸುದ್ದಿ ಕೇಳಿ ಆ ನೋವಿನಲ್ಲೇ ಪತ್ನಿಯೂ ಮೃತಪಟ್ಟಿರುವುದನ್ನು ಕೇಳಿದ್ದೇವೆ. ಆದರೆ ದಾವಣಗೆರೆ ನಗರದಲ್ಲಿ ಅತೀ ಅಪರೂಪ ಎನ್ನಿಸುವ ಘಟನೆಯೊಂದು ಗುರುವಾರ ತಡರಾತ್ರಿ ನಡೆದಿದೆ. ಪತಿ-ಪತ್ನಿ ಮಲಗಿದ್ದಲ್ಲೇ ಮೃತಪಟ್ಟಿದ್ದು, ಒಬ್ಬರು ನಿಧನರಾಗಿದ್ದು, ಮತ್ತೂಬ್ಬರಿಗೆ ಗೊತ್ತಿಲ್ಲ.

Advertisement

ವಿನೋಬ ನಗರದ ತೋಟಗಾರಿಕೆ ಇಲಾಖೆ ಪಕ್ಕದ 2ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಕೃಷ್ಣಮೂರ್ತಿ ಗಾಯಕವಾಡ್‌ (78) ಅನುರಾಧ ಕೃಷ್ಣಮೂರ್ತಿ ಗಾಯಕವಾಡ್‌ (62) ಮೃತ ಪತಿ. ಕೃಷ್ಣಮೂರ್ತಿ ಅವರು ಇತ್ತೀಚೆಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಪತ್ನಿ ಅನುರಾಧ ಎಂದಿನಂತೆ ಗುರುವಾರ ರಾತ್ರಿ ಪತಿಗೆ ಗಂಜಿ ಮಾಡಿ, ಊಟ ಮಾಡಿಸಿ ಮಲಗಿದ್ದಾರೆ. ನಂತರ ಕೆಲಹೊತ್ತಿನಲ್ಲಿ ಉಸಿರಾಟದ ತೊಂದರೆಯಿಂದ ಪತಿ ನಿಧನರಾಗಿದ್ದಾರೆ. ಪತಿ ಮೃತಪಟ್ಟಿರೋದು ಅನುರಾಧಾ ಅವರ ಗಮನಕ್ಕೂ
ಬಂದಿಲ್ಲ. ಆದರೆ ಇದಾದ ಕೆಲ ಸಮಯದಲ್ಲಿ ನಿದ್ರೆಯಲ್ಲಿದ್ದ ಅನುರಾಧ ಕೂಡ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next