Advertisement

ದೇಶವೀಗ ಸುರಕ್ಷತೆಯ ಸವಾಲು ಎದುರಿಸುತ್ತಿದೆ

03:56 AM Jan 02, 2019 | Team Udayavani |

ಹೊಸದಿಲ್ಲಿ: ದೇಶವು ಪ್ರಸ್ತುತ ಅತ್ಯಂತ ಭಿನ್ನ ರೀತಿಯಲ್ಲಿ ಭದ್ರತೆಯ ಸವಾಲು ಎದುರಿಸುತ್ತಿದೆ. ಗಡಿಯಲ್ಲಿನ ಪರಿಸ್ಥಿತಿಯಿಂದಾಗಿ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಆಂತರಿಕ ಭದ್ರತೆಗೆ ಸವಾಲು ಎದುರಾಗಿದೆ ಎಂದು ಭೂಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಹೇಳಿದ್ದಾರೆ.

Advertisement

ಭೂಸೇನೆಯ ಯೋಧರಿಗೆ, ಅಧಿಕಾರಿಗಳಿಗೆ ಕಳುಹಿಸಿರುವ ಹೊಸ ವರ್ಷದ ಸಂದೇಶದಲ್ಲಿ ಅವರು ಈ ಅಂಶ ಪ್ರಸ್ತಾಪ ಮಾಡಿದ್ದಾರೆ. ಇದುವರೆಗೆ ಉಂಟಾದ ಸವಾಲುಗಳನ್ನು ಧೈರ್ಯದಿಂದ ಸೈನಿಕರು ಎದುರಿಸಿರುವುದು ಶ್ಲಾಘನೀಯ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣ ರೇಖೆ ಮತ್ತು ಚೀನದೊಂದಿಗೆ ಹೊಂದಿರುವ 4 ಸಾವಿರ ಕಿ.ಮೀ. ಗಡಿಯ ಬಗ್ಗೆ ಭೂಸೇನಾ ಮುಖ್ಯಸ್ಥರು ಯಾವುದೇ ಪ್ರಸ್ತಾಪ ಮಾಡಿಲ್ಲ. ಸೈನಿಕರ ತ್ಯಾಗ, ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಿದ್ದರಿಂದ ದೇಶದ ಪ್ರಾದೇ ಶಿಕ ಸಮಗ್ರತೆಯನ್ನು ಕಾಯ್ದುಕೊಳ್ಳಲು ನೆರವಾಗಿದೆ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಚೀನ ಗಡಿ ಗುಂಟ ಭೂಸೇನೆ ಗಸ್ತು ತಿರುಗುವುದನ್ನು ಮತ್ತಷ್ಟು ಚುರುಕುಗೊಳಿಸಿದೆ ಎಂದಿದ್ದಾರೆ ಜ|ರಾವತ್‌. 12 ಲಕ್ಷ ಸೈನಿಕರು ಇನ್ನೂ ಹೆಚ್ಚಿನ ಸ್ಫೂರ್ತಿಯಿಂದ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next