Advertisement

ತಡರಾತ್ರಿವರೆಗೂ ಮತ ಎಣಿಕೆ!

12:05 PM Jun 14, 2019 | Team Udayavani |

ಗಂಗಾವತಿ: ಸರಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆಯ ಮತದಾನ ಬುಧವಾರ ನಗರದ ಸರಕಾರಿ ಬಾಲಕಿಯರ ಶಾಲೆಯಲ್ಲಿ ಜರುಗಿತು. ಪ್ರಾಥಮಿಕ ಶಾಲಾ ಶಿಕ್ಷಕರ 4, ಹೈಸ್ಕೂಲ್-02, ಶಿಶು ಅಭಿವೃದ್ಧಿ-01, ಕಂದಾಯ ಇಲಾಖೆ-02 ಮತ್ತು ಬಿಇಒ ಕಚೇರಿಯ -01 ಸ್ಥಾನಕ್ಕೆ ಮತದಾನ ನಡೆದಿದ್ದು ತೀವ್ರ ಕುತೂಹಲ ಮೂಡಿಸಿತ್ತು. ಒಟ್ಟು 31 ಸ್ಥಾನಗಳ ಪೈಕಿ ಈಗಾಗಲೇ 21 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಬುಧವಾರ ಜರುಗಿದ ಚುನಾವಣೆಯಲ್ಲಿ ಕಂದಾಯ ಇಲಾಖೆಯಿಂದ ಮಂಜುನಾಥ ಸ್ವಾಮಿ ಹಿರೇಮಠ, ಶೇಖರಪ್ಪ, ಶಿಶು ಅಭಿವೃದ್ಧಿ ಇಲಾಖೆಯಿಂದ ಕಲ್ಲಪ್ಪ, ಹೈಸ್ಕೂಲ್ ವಿಭಾಗದಿಂದ ಉಮೇಶ ಮಡಿವಾಳರ್‌, ಹನುಮಂತಪ್ಪ ಮರಾಠೊಡ್‌, ಬಿಇಒ ಕಚೇರಿಯಿಂದ ಶ್ರೀಧರ ಉಳ್ಳಾಗಡ್ಡಿ, ಪ್ರಾಥಮಿಕ ಶಾಲೆಯ ಕ್ಷೇತ್ರಗಳಿಂದ ಶರಣೇಗೌಡ, ಭುಜಂಗಪ್ಪ, ರುದ್ರೇಗೌಡ ಮತ್ತು ಛತ್ರಪ್ಪ ತಂಬೂರಿ ಆಯ್ಕೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next