Advertisement

ಕೋರ್ಟ್‌ ಮೇಲಿನ ಒತ್ತಡ ಇಳಿಸಲು ಸಂಧಾನದ ಸಲಹೆ

07:20 AM Sep 08, 2017 | Team Udayavani |

ಹೊಸದಿಲ್ಲಿ: ಯಾವುದೇ ವಿವಾದ ಅಥವಾ ಭಿನ್ನಾಭಿಪ್ರಾಯಗಳಿದ್ದರೂ ನ್ಯಾಯಾಲಯದ ಮೊರೆ ಹೋಗದೆ ಮಧ್ಯಸ್ಥಿಕೆ ಮತ್ತು ಸಂಧಾನದ ಮೂಲಕ ಪರಿಹರಿಸಿಕೊಳ್ಳುವಂತೆ ಸರಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಕಾನೂನು ಸಚಿವಾಲಯ ಸೂಚಿಸಿದೆ.

Advertisement

ದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು ಬಾಕಿ ಇರುವ ಮೂರು ಕೋಟಿಗೂ ಹೆಚ್ಚು ಪ್ರಕರಣಗಳ ಪೈಕಿ ಶೇ.46ರಷ್ಟು ಪ್ರಕರಣಗಳು ಸರಕಾರ, ಸಚಿವಾಲಯ ಅಥವಾ ಇಲಾಖೆಗಳಿಗೆ ಸಂಬಂಧಿಸಿದವುಗಳಾಗಿವೆ. ಹೀಗಾಗಿ ನ್ಯಾಯಾಂಗದ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಆನ್‌ಲೈನ್‌ ಮಧ್ಯಸ್ಥಿಕೆ, ಸಂಧಾನ ಅಥವಾ ಮಾತುಕತೆ ಮೂಲಕ ಸಚಿವಾಲಯ ಹಾಗೂ ಇಲಾಖೆಗಳ ಆಂತರಿಕ ವ್ಯಾಜ್ಯಗಳನ್ನು ಪರಿಹರಿಸಿ ಕೊಳ್ಳುವಂತೆ ಸಲಹೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರ ವೃತ್ತವಾಗಿರುವ ಸಚಿವಾಲಯದ ನ್ಯಾಯಿಕ ಇಲಾಖೆ, ಕೋರ್ಟ್‌ ಹೊರಗೆ ವ್ಯಾಜ್ಯ ಬಗೆಹರಿಸುವ ವಿವಿಧ ಸಂಸ್ಥೆ, ಏಜೆನ್ಸಿಗಳ ಪಟ್ಟಿ ಸಿದ್ಧಪಡಿಸಿದೆ. “ನ್ಯಾಯಾಲಯಗಳು ಸಾರ್ವಜನಿಕರಿಗೆ ಯಾವುದೇ ಒತ್ತಡ ಇಲ್ಲದೆ ಸೇವೆ ಒದಗಿಸಲು ಈ ಕ್ರಮ ನೆರವಾಗಲಿದೆ,’ ಎಂದು ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next