Advertisement

Council: ‘ನಗರಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರಿಗಳ ಮಾತೇ ಅಂತಿಮ ಎನ್ನುವಂತಿದೆ’.’

12:32 AM Jul 19, 2024 | Team Udayavani |

ಬೆಂಗಳೂರು: ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನಡೆಯದೆ ಹಲವು ತಿಂಗಳು ಕಳೆದಿರುವುದು ಹಾಗೂ ಚುನಾಯಿತ ಸದಸ್ಯರಿಗೆ ಅಧಿಕಾರವಿಲ್ಲದ ಬಗ್ಗೆ ಉದಯವಾಣಿ ಸುದಿನ ಜೂ. 30ರಂದು ಪ್ರಕಟಿಸಿದ “ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರ ಇದ್ದೂ ಇಲ್ಲದಂತಾದ ಚುನಾಯಿತ ಸದಸ್ಯರು’ ಎನ್ನುವ ವರದಿ ಜು. 18ರಂದು ವಿಧಾನಪರಿಷತ್‌ನಲ್ಲಿ ಗಮನಸೆಳೆಯಿತು.

Advertisement

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರು ಸಾಲಿಗ್ರಾಮ ಪ.ಪಂ., ಉಡುಪಿ ನಗರಸಭೆ ಸೇರಿದಂತೆ ರಾಜ್ಯದ ಎಲ್ಲ ಪ.ಪಂ. ಹಾಗೂ ನಗರಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಇಲ್ಲಿ ಆಡಳಿತಾಧಿಕಾರಿಗಳ ಆಡಳಿತವಿದ್ದು ಅಧಿಕಾರಿಗಳ ಮಾತೇ ಅಂತಿಮ ಎನ್ನುವಂತಾಗಿದೆ.

ಇದರಿಂದಾಗಿ ಜನರ ಕೆಲಸಗಳು ಸರಿಯಾಗಿ ಆಗುತ್ತಿಲ್ಲ, ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ. ಚುನಾಯಿತ ಸದಸ್ಯರಿಗೆ ನೇರ ಅಧಿಕಾರವಿಲ್ಲದ ಕಾರಣ ಹೆಸರಿಗಷ್ಟೇ ಸದಸ್ಯರು ಎನ್ನುವಂತಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಜನಪ್ರನಿಧಿಗಳ ಹಿತದೃಷ್ಟಿಯಿಂದ ಕಾನೂನು ತೊಡಕುಗಳನ್ನು ನಿವಾರಿಸಿ ಆದಷ್ಟು ಬೇಗ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸೂಕ್ತ ಕ್ರಮದ ಭರವಸೆ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next