Advertisement

‘ಪುನೀತ ಪರ್ವ’ದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ : ಕ್ಷಮೆ ಕೇಳಿದ ರಿಷಬ್

10:14 PM Oct 21, 2022 | Team Udayavani |

ಬೆಂಗಳೂರು : ಪೂರ್ವನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಬಹ್ರೇನ್‌ನಲ್ಲಿರುವ ಕಾರಣ, ಇಂದಿನ ‘ಪುನೀತ ಪರ್ವ’ದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

Advertisement

ಟ್ವೀಟ್ ನಲ್ಲಿ ಪುನೀತ ಪರ್ವ ಕಾರ್ಯಕ್ರಮ ಲೈವ್ ನೋಡುತ್ತಾ ಕಣ್ತುಂಬಿ ಬಂದವು. ನಾನೂ ಅಲ್ಲಿ, ಆ ನೆನಪುಗಳ ನಡುವೆ ಇರಬೇಕಿತ್ತು ಎನ್ನಿಸಿತು. ಅಪ್ಪು ಸರ್ ಕ್ಷಮೆಯಿರಲಿ, ಮೊದಲ ದಿನವೇ ಗಂಧದಗುಡಿಯಲ್ಲಿ ಭೇಟಿಯಾಗೋಣ” ಎಂದು ಬರೆದಿದ್ದಾರೆ.

ಇದನ್ನೂ ಓದಿ : ಕುಟುಂಬ ಸಮೇತ ಕಾಂತಾರ ಚಿತ್ರ ವೀಕ್ಷಿಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

ವೇದಿಕೆಯಲ್ಲಿ ಕಾಂತಾರ ನೆನಪಿಸಿದ ಪ್ರಕಾಶ್ ರಾಜ್

‘ಪುನೀತ ಪರ್ವ’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಖ್ಯಾತ ನಟ ಪ್ರಕಾಶ್ ರಾಜ್ , ಅಪ್ಪು ಅವರು ಇದ್ದಿದ್ದರೆ ಕಾಂತಾರ ಚಿತ್ರ ತಂಡವನ್ನು ಅಪ್ಪಿಕೊಂಡು ಅಭಿನಂದಿಸುತ್ತಿದ್ದರು. ಅವರು ಇದ್ದಾರೆ ಅಂದುಕೊಳ್ಳುವ, ನಮ್ಮ ಜಾನಪದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ರಿಷಬ್ ಶೆಟ್ಟಿ, ವಿಜಯ್ ಅವರಿಗೆ ಅಭಿನಂದನೆಗಳು ಎಂದರು.

Advertisement

ಸಮಾರಂಭದಲ್ಲಿ ಡಾ. ರಾಜ್ ಕುಟುಂಬಸ್ಥರು, ಸಿಎಂ ಬಸವರಾಜ್ ಬೊಮ್ಮಾಯಿ,ಸಚಿವರು, ದಕ್ಷಿಣ ಭಾರತದ ಖ್ಯಾತ ನಟರು , ಕನ್ನಡ ಚಿತ್ರ ರಂಗದ ನಟ, ನಟಿಯರು ಗಣ್ಯರು ಸಾವಿರಾರು ಮಂದಿ ಅಭಿಮಾನಿಗಳು ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next