Advertisement

1ರಿಂದ ಹತ್ತಿ ಖರೀದಿ ಪುನಃ ಆರಂಭ

05:43 PM Apr 29, 2020 | Suhan S |

ಲಕ್ಷ್ಮೇಶ್ವರ: ಭಾರತೀಯ ಹತ್ತಿ ನಿಗಮದಿಂದ ಪಟ್ಟಣದಲ್ಲಿ ಮೇ 1ರಿಂದ ಬೆಂಬಲ ಬೆಲೆಯಡಿ ಹತ್ತಿ ಖರೀದಿ ಪ್ರಕ್ರಿಯೆ ಪುನರಾಂಭಗೊಳ್ಳಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಪಿಎಂಸಿ ಕಾರ್ಯದರ್ಶಿ ಎನ್‌.ಎ. ಲಕ್ಕುಂಡಿ ತಿಳಿಸಿದ್ದಾರೆ.

Advertisement

ಹತ್ತಿ ಮಾರಾಟಕ್ಕೆ ತರುವ ರೈತರು ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಜಮೀನಿನ ಉತಾರದೊಂದಿಗೆ ಎಪಿಎಂಸಿಯಲ್ಲಿ ಪಾಳೆ ಚೀಟಿ ಪಡೆಯಬೇಕು. ನಿತ್ಯ 20 ಗಾಡಿಗಳನ್ನು ಮಾತ್ರ ಖರೀದಿಸಲಾಗುವುದು. ರೈತ ಬಾಂಧವರು ಡ್ರೈವರ್‌ ಸೇರಿ ಇಬ್ಬರು ಮಾತ್ರ ಬರಬೇಕು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯುವ ಮೂಲಕ ಬೆಂಬಲ ಬೆಲೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಬೆಂಬಲ ಬೆಲೆ ಖರೀದಿ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿದಂತೆಯೇ ರೈತರು ಅತ್ಯಂತ ಕಡಿಮೆ ಬೆಲೆಗೆ ಅಂದರೆ 3,000 ದಿಂದ 3,500 ರೂ. ವರೆಗೆ ಮಾರಾಟ ಮಾಡಿದ್ದಾರೆ. ಈಗ ಮತ್ತೆ ಸಿಸಿಐ 5110 ರಿಂದ 5350 ರೂ. ವರೆಗೆ ಖರೀದಿ ಮಾಡುತ್ತಿರುವುದು ಕಡಿಮೆ ಬೆಲೆಗೆ ಮಾರಾಟ ಮಾಡಿದ ರೈತರು ಕೈ-ಕೈ ಹಿಚಿಕಿಕೊಳ್ಳುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next