Advertisement

ಮಳೆ ಅವಾಂತರಕ್ಕೆ ಬೆಳೆ ಹಾನಿ: ಕೈಗೆ ಬಂದ ತುತ್ತು ಬಾಯಿಗೆ ಬರದಾಯಿತು!

03:54 PM Oct 15, 2020 | keerthan |

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಅನ್ವದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಸಾಲ ಮಾಡಿ ಬೆಳೆದ ಬೆಳೆಗಳು ಅತಿವೃಷ್ಟಿಗೆ ಆಹುತಿಯಾಗುತ್ತಿರುವುದು ರೈತರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.

ಕೃಷ್ಣಾ ಮತ್ತು ಭೀಮಾನದಿ ಪ್ರವಾಹದಿಂದ ಜಿಲ್ಲೆಯ ಯಕ್ಷಿಂತಿ, ಕುರಿಹಾಳ, ಮಲ್ಹಾರ್, ಬೆಳಗೇರಾ ಸೇರಿದಂತೆ ಯಾದಗಿರಿ, ವಡಗೇರಾ, ಸುರಪುರ ಹಾಗೂ ಶಹಾಪುರ ತಾಲೂಕಿನ ರೈತರ ಹತ್ತಿ ಬೆಳೆ ಹಾನಿಯಾಗಿದೆ. ಅದಲ್ಲದೆ ಇನ್ನೇನು ವಾರದಲ್ಲಿ ಭತ್ತ ಕಟಾವು ಮಾಡುವ ಆಲೋಚನೆಯಲ್ಲಿದ್ದ ರೈತರ ಗಾಯದ ಮೇಲೆ ಮಳೆರಾಯ ಬರೆ ಎಳೆದಿದ್ದು ಗದ್ದೆಗಳಲ್ಲಿ ಭತ್ತದ ತೆನೆ ನೆಲಕಚ್ಚಿದೆ.

ಇದನ್ನೂ ಓದಿ:ಗಾಳಿ ಮಳೆಗೆ ನೆಲಕಚ್ಚಿದ ಭತ್ತ: ಬೆಳೆ ಕಟಾವಿಗೆ ತೀವ್ರ ತೊಂದರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next