Advertisement

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹೊರಟವರಿಗೆ ತಡೆ: ಕರಾವಳಿಯ 30 ಮಂದಿ ಬಸ್ಸಿನಲ್ಲೇ ಬಾಕಿ

09:41 AM May 20, 2020 | mahesh |

ಉಡುಪಿ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಖಾಸಗಿ ಬಸ್‌ನಲ್ಲಿ ಹೊರಟಿದ್ದ ಉಡುಪಿ ಮತ್ತು ಮಂಗಳೂರು ಮೂಲದ 30 ಮಂದಿಯನ್ನು ಕರ್ನಾಟಕ ಗಡಿಭಾಗದಲ್ಲಿ ತಡೆಯಲಾಗಿದ್ದು ಅವರೆಲ್ಲ ಅತಂತ್ರರಾಗಿದ್ದಾರೆ. ಸದ್ಯ ಅವರೆಲ್ಲರೂ ಮಹಾರಾಷ್ಟ್ರ ಗಡಿಯ ನಿಪ್ಪಾಣಿಗಿಂತ 17 ಕಿ.ಮೀ. ದೂರದ ಕಾಗಲ್‌ನಲ್ಲಿ ಬಸ್ಸಿನಲ್ಲೇ ಉಳಿದುಕೊಂಡಿದ್ದಾರೆ.

Advertisement

ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಿ ಮುಂಬಯಿಲ್ಲಿ ಉಳಿದುಕೊಂಡಿದ್ದ ಅವರಿಗೆ ಮುಂಬಯಿಯಲ್ಲಿ ವಾಸವಿರುವ ಉಡುಪಿ ಮೂಲದ ವಿಜಯಲಕ್ಷ್ಮಿ ಎಂಬವರು ಕರ್ನಾಟಕಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದರು. ಅದರಂತೆ ರಾಜ್ಯಕ್ಕೆ ಆ 30 ಮಂದಿ ತಲಾ 4500 ರೂ ಹಣ ನೀಡಿ ಸೀಟು ಕಾದಿರಿಸಿದ್ದರು. ಮೇ 18ರಂದು ಸಂಜೆ ಮುಂಬಯಿಯಿಂದ ಹೊರಟ ಅವರು ಈಗ ಅತಂತ್ರ ರಾಗಿದ್ದಾರೆ. ಬಸ್ಸಿನಲ್ಲಿ ಉಡುಪಿ ಮೂಲದ ತುಂಬು ಗರ್ಭಿಣಿ ಮಹಿಳೆಯೂ ಇದ್ದಾರೆ. ನಮ್ಮನ್ನು ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡುವಂತೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಎಲ್ಲರನ್ನು ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next