Advertisement

ಉದ್ದಿಮೆಗಳ ಕಾರ್ಪೊರೇಟ್‌ ತೆರಿಗೆ ಕಡಿತ: ಆರ್ವಿಡಿ ಸ್ವಾಗತ

10:35 PM Sep 20, 2019 | Lakshmi GovindaRaju |

ಬೆಂಗಳೂರು: ಉದ್ದಿಮೆಗಳ ಮೇಲೆ ವಿಧಿಸಿದ್ದ ಕಾರ್ಪೊರೇಟ್‌ ತೆರಿಗೆಯನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಸ್ವಾಗತಿಸಿದ್ದಾರೆ. ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತೆಗೆದು ಕೊಂಡ ನಿರ್ಧಾರ ಸಮಯೋಚಿತ ಮತ್ತು ಸಮಂಜಸವಾಗಿದೆ ಎಂದಿದ್ದಾರೆ.

Advertisement

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಪ್ರಸ್ತುತ ಕಂಪನಿಗಳ ಮೇಲಿನ ತೆರಿಗೆಯನ್ನು 22 ಹಾಗೂ ಹೊಸ ಉತ್ಪಾದಕ ಸಂಸ್ಥೆಗಳ ಮೇಲಿನ ತೆರಿಗೆಯನ್ನು 15ಕ್ಕೆ ಇಳಿಸುವ ಮೂಲಕ ಕಾರ್ಪೊರೇಟ್‌ ವಲಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಹೇಳಿದ್ದಾರೆ. ದೇಶದ ಆರ್ಥಿಕ ಬೆನ್ನೆಲುಬಾಗಿರುವ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಿದಂತಾಗುತ್ತದೆ.

ಆರ್ಥಿಕ ಹಿಂಜರಿತದಿಂದ ಅನೇಕ ಕೈಗಾರಿಕೆಗಳು ನಿರು ದ್ಯೋಗ ಸಮಸ್ಯೆ ಹುಟ್ಟು ಹಾಕಿವೆ. ಹೀಗಾಗಿ ಉದ್ದಿಮೆದಾರರ ವಿಶ್ವಾಸ ಹೆಚ್ಚಿಸಿ, ಉದ್ದಿಮೆಗಳಿಗೆ ಜೀವ ತುಂಬಬೇಕಾದ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. 2020ರ ಮಾರ್ಚ್‌ವರೆಗೆ ಆರಂ ಭಿ ಸುವ ಸಣ್ಣ ಹಾಗೂ ಮಧ್ಯಮ, ಅತಿ ಸಣ್ಣ ಉದ್ದಿಮೆಗಳ ಸಾಲವನ್ನು ಬಲವಂತವಾಗಿ ವಸೂಲಿ ಮಾಡಬಾರದೆಂದು ಹೇಳಿರುವುದು ಪ್ರಶಂಸನೀಯ ಎಂದಿದ್ದಾರೆ.

ಸಣ್ಣ ಉದ್ದಿಮೆಗಳಿಗೆ ಮುಂಗಡ ಸಾಲ ಮರು ಪಾವತಿಸುವ ಅವಧಿಯನ್ನು 5 ವರ್ಷಗಳಿಗಿಂತಲೂ ಹೆಚ್ಚು ಮಾಡಿ ದೀರ್ಘಾವಧಿ ಸಾಲ ಮರುಪಾವತಿ ಅವಧಿಯನ್ನು 10-15 ವರ್ಷಕ್ಕೆ ಹೆಚ್ಚಿಸುವಂತೆ ದೇಶಪಾಂಡೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next