Advertisement

ಮಹಾರಾಷ್ಟ್ರದಿಂದ ಬಂದಐವರಿಗೆ ಸಾಂಸ್ಥಿಕ ಕ್ವಾರಂಟೈನ್‌

01:02 PM Jun 16, 2020 | mahesh |

ಮೊಳಕಾಲ್ಮೂರು: ಮಹಾರಾಷ್ಟ್ರದ ಪೂನಾದಿಂದ ತಾಲೂಕಿಗೆ ಆಗಮಿಸಿರುವ ಐವರನ್ನು ಪಟ್ಟಣದ ಹೊರವಲಯದಲ್ಲಿರುವ ಆರ್‌.ಎಂ.ಎಸ್‌.ಎ ಬಾಲಕಿಯರ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ತಾಲೂಕಿನ ರಾಂಪುರ ಗ್ರಾಮದ 36 ವರ್ಷದ ಪುರುಷ, 35 ವರ್ಷದ ಮಹಿಳೆ , 15 ವರ್ಷದ ಬಾಲಕಿ ಮತ್ತು 2 ವರ್ಷದ ಗಂಡುಮಗು ಒಂದೇ ಕುಟುಂಬದವರಾಗಿದ್ದಾರೆ. ಈ ನಾಲ್ವರು ಬೈನಲ್ಲಿರುವ ಸಂಬಂಧಿಕರನ್ನು ನೋಡಲು ಹೋಗಿದ್ದರು. ಜೂ. 12 ರಂದು ಸಂಜೆ ರಾಂಪುರಕ್ಕೆ ಆಗಮಿಸಿದ್ದರು. ಹಾಗೆಯೇ ಜೂ. 14 ರಂದು ಮೊಳಕಾಲ್ಮೂರು ಪಟ್ಟಣದ 19 ವರ್ಷದ ಯುವಕ ಪೂನಾದಿಂದ ಬಂದಿದ್ದು, ಆತನನ್ನೂ ಸೇರಿ ಒಟ್ಟು 5 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿಡಲಾಗಿದೆ.

Advertisement

ಈ ಐದು ಜನರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಉಪ ತಹಶೀಲ್ದಾರ್‌ ಏಳುಕೋಟಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಕೋವಿಡ್‌-19 ತಾಲೂಕು ನೋಡಲ್‌ ಅಧಿಕಾರಿ ಡಿ. ಚಿದಾನಂದಪ್ಪ , ಆರ್‌.ಆರ್‌. ತಂಡದ ಒ. ಶ್ರೀನಿವಾಸ್‌, ವೈ. ತಿಪ್ಪೇಸ್ವಾಮಿ, ಗ್ರಾಮಲೆಕ್ಕಾಧಿಕಾರಿ ವಾಲೇಕರ್‌, ಆಶಾ ಕಾರ್ಯಕರ್ತೆ, ತಹಶೀಲ್ದಾರ್‌ ಎಂ. ಬಸವರಾಜ್‌ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ| ಪದ್ಮಾವತಿ ಆರ್‌.ಎಂ.ಎಸ್‌.ಎ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next