Advertisement

ರಾಮಮಂದಿರ ನಿರ್ಮಾಣವಾದ ಕೂಡಲೇ ಕೋವಿಡ್ ವೈರಸ್ ನಾಶ: ಬಿಜೆಪಿ ಸಂಸದೆ

08:03 AM Jul 29, 2020 | Mithun PG |

ರಾಜಸ್ಥಾನ: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಕೂಡಲೇ ಕೋವಿಡ್ ವೈರಸ್ ನಾಶವಾಗುತ್ತದೆ ಎಂದು ಬಿಜೆಪಿ ಸಂಸದೆ ಜಸ್ ಕೌರ್ ಮೀನಾ ತಿಳಿಸಿದ್ದಾರೆ.

Advertisement

ರಾಜಸ್ಥಾನದ ದೌಸಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆಯಾಗಿರುವ  ಮೀನಾ ಅವರು ಕೋವಿಡ್ -19 ಸಾಂಕ್ರಾಮಿಕಕ್ಕೆ ಪರಿಹಾರ ರಾಮ ಮಂದಿರ ನಿರ್ಮಾಣ. ನಾವು ಆಧ್ಯಾತ್ಮಿಕ ಶಕ್ತಿಗಳ ಅನುಯಾಯಿಗಳು. ರಾಮ ಮಂದಿರ ನಿರ್ಮಿಸಿದ ಕೂಡಲೇ ವೈರಸ್ ನಾಶವಾಗಲಿದೆ ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಅವರು ಕೂಡ ಇದೇ ಮಾದರಿಯ ಹೇಳಿಕೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣದ ಆರಂಭದೊಂದಿಗೆ ಕೋವಿಡ್ ವೈರಸ್  ಸಾಂಕ್ರಾಮಿಕ ರೋಗವು ಕೊನೆಗೊಳ್ಳಲಿದೆ ಎಂದು ಶರ್ಮಾ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ  ಮಂದಿರದ ನಿರ್ಮಾಣ ಕಾರ್ಯವು ಆಗಸ್ಟ್ 5 ರಂದು ಭೂಮಿ ಪೂಜೆಯೊಂದಿಗೆ  ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು 200 ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next