Advertisement

Davanagere ಕದ್ದ ಬೈಕ್‌ ಮಾರಾಟಕ್ಕೆ ಸಹಕಾರ: ನಾಲ್ವರು ದ್ವಿತೀಯ ದರ್ಜೆ ಗುಮಾಸ್ತರ ಬಂಧನ

08:47 PM Aug 01, 2023 | Team Udayavani |

ದಾವಣಗೆರೆ: ಕಳ್ಳತನ ಮಾಡಿದ್ದ ಬೈಕ್‌ಗಳನ್ನು ಮೂಲ ಮಾಲಿಕರ ಗಮನಕ್ಕೆ ತರದೆ ಬೇರೆಯವರಿಗೆ ನೋಂದಣಿಗೆ ಸಹಕರಿಸಿದ್ದ ದಾವಣಗೆರೆಯ ಪ್ರಾದೇಶಿಕ ಸಾರಿಗೆ ಇಲಾಖೆಯ ನಾಲ್ವರು ದ್ವಿತೀಯ ದರ್ಜೆ ಗುಮಾಸ್ತರು ಮತ್ತು ಓರ್ವ ಮಧ್ಯವರ್ತಿಯನ್ನು ಮಂಗಳವಾರ ಬಸವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

Advertisement

ಈಚೆಗೆ ಪತ್ತೆಯಾಗಿದ್ದ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಬೇರೆಯವರಿಗೆ ನೋಂದಣಿಯಾಗಿರುವುದು ಪತ್ತೆಯಾಗಿದೆ. ದಾವಣಗೆರೆಯ ಸಿಇಎನ್ ಪೊಲೀಸ್‌ಗೆ ಮಾಹಿತಿ ನೀಡಲಾಗಿತ್ತು.

ಬೈಕ್‌ಗಳ ಮೂಲ ಮಾಲಿಕರಿಗೆ ಗೊತ್ತಾಗದಂತೆ ಅವರ ಸಹಿಗಳನ್ನು ಪೋರ್ಜರಿ ಮಾಡಿ, ಬೇರೆಯವರಿಗೆ ನೋಂದಣಿ ಮಾಡಿಕೊಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ನಾಲ್ವರು ದ್ವಿತೀಯ ದರ್ಜೆ ಸಹಾಯಕರನ್ನು ಬಸವನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕೃತ್ಯಕ್ಕೆ ಸಂಬಂಽಸಿದಂತೆ ರಸೂಲ್ ಎಂಬ ಮಧ್ಯವರ್ತಿಯನ್ನ ಸಹ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next