Advertisement

ಕೊಲೆ ಗಡುಕರಿಗೆ ಕಠಿಣ ಶಿಕ್ಷೆ ವಿಧಿಸಿ

10:52 AM Dec 29, 2017 | |

ಆಳಂದ: ವಿಜಯಪುರ ನಗರದ ಶಾಲಾ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಅವಳ ಕೊಲೆ ನಡೆಸಿದ ಕಟುಕರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ತಾಲೂಕು ಭಾರತೀಯ ಜನತಾ ಪಕ್ಷದ ಯುವ ಮೂರ್ಚಾ ಘಟಕದ ಅಧ್ಯಕ್ಷ ಸಿದ್ದು ಸಿ. ಹಿರೋಳಿ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಇನ್ನಿತರ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪ್ರಮುಖ ರಸ್ತೆಗಳ ಮೂಲಕ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಾಲಕಿ ಮೇಲೆ ನಡೆದ ಸಾಮೂಹಿಕ
ಅತ್ಯಾಚಾರ, ಕೊಲೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಆಗಿದೆ. ಮಹಿಳೆಯರು ಮತ್ತು ಬಾಲಕಿಯರ ಮೆಲೆ ಅತ್ಯಾಚಾರ, ಕೊಲೆ ಪ್ರಕರಣಗಳು ದಿನೆ ದಿನೇ ಹೆಚ್ಚುತ್ತಿವೆ. ಪೊಲೀಸ್‌ ಇಲಾಖೆ ಕಾರ್ಯ ವಿಫಲಗೊಂಡಿದೆ ಎಂದು ಆಪಾದಿಸಿದರು. 

ಪರಿಸ್ಥಿತಿ ಇದೆ ರೀತಿ ಮುಂದುವರಿದರೆ ಸರ್ಕಾರದ ಸೇವೆಗಾಗಿ ಮಹಿಳೆಯರು ಹಾಗೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದಂತಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರಾಜ್ಯ ಪಾಲರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ಶ್ರೀನಿವಾಸ ಕುಲಕರ್ಣಿ ಮೂಲಕ ಸಲ್ಲಿಸಿದರು. ಜಿಲ್ಲಾ ಯುವ ಮುರ್ಚಾ ಅಧ್ಯಕ್ಷ ಪ್ರವೀಣ ತೆಗನೂರ, ಬಿಜೆಪಿ ಯುವ ಮುಖಂಡ ರಾಘವೆಂದ್ರ ಚಿಂಚನಸೂರ, ಅಶೋಕ ಬಬಲಾದ, ಶರಣು ಸಜನಶೆಟ್ಟಿ, ರಾಹುಲ ಬೀಳಗಿ, ವಿದ್ಯಾರ್ಥಿನಿ ಸ್ವಾತಿ ಸವಳಿ, ಭಾಗ್ಯಶ್ರೀ ಕಾಮದೆ, ಗಂಗಶ್ರೀ ಪಾಟೀಲ, ವೈಶಾಲಿ, ಪ್ರತಿಮಾ, ಶಿವಲಿಲಾ, ಮಲ್ಲಿಕಾರ್ಜುನ ಸವಳಗಿ,
ಶರಣು ನಾಗದೆ, ಪ್ರಭಾಕರ ನಾಗುರೆ, ಮಹೇಶ ಗೌಳಿ, ಬಿಚ್ಚು ಸೋನಾರ, ಮಿಥುನ ರಾಠೊಡ, ಅಮುಲ ಘನಾತೆ
ಹಾಗೂ ಕಾರ್ಯಕರ್ತರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದರು. 

Advertisement

Udayavani is now on Telegram. Click here to join our channel and stay updated with the latest news.

Next