Advertisement

ಸಹಕಾರಿ ಬ್ಯಾಂಕ್‌ಗಳಿಂದ ಬಡವರು-ವ್ಯಾಪಾರಸ್ಥರಿಗೆ ಅನುಕೂಲ

02:43 PM Sep 24, 2017 | Team Udayavani |

ಮಾನ್ವಿ: ಸಹಕಾರಿ ಸಂಸ್ಥೆಗಳು ಬಡವರು, ರೈತರು ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದು ಚೀಕಲಪರ್ವಿ ಮಠದ ಶ್ರೀ ಅಭಿನವ ರುದ್ರಮುನಿ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಧ್ಯಾನ ಮಂದಿರದಲ್ಲಿ ನಡೆದ ವಿರೂಪಾಕ್ಷೇಶ್ವರ ಪತ್ತಿನ ಸೌಹರ್ದ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವುದರಿಂದ ಹಾಗೂ ಸಾಲಗಾರರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವುದರಿಂದ ಸಹಕಾರಿ ಬ್ಯಾಂಕ್‌ಗಳ ಅಭಿವೃದ್ಧಿ ಸಾಧ್ಯ
ಎಂದರು.

ವಿರೂಪಾಕ್ಷೇಶ್ವರ ಪತ್ತಿನ ಬ್ಯಾಂಕ್‌ 2016-17ನೇ ಸಾಲಿನಲ್ಲಿ 96 ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಗಳಿಸಿರುವುದು
ಶ್ಲಾಘನೀಯ ಕಾರ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಕಲ್ಮಠದ ಡಾ|ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಹಕಾರಿ ಸಂಸ್ಥೆಗಳ ಮೂಲಕ ಬಡವರಿಗೆ, ರೈತರಿಗೆ ಮತ್ತು ಸಣ್ಣ ವ್ಯಾಪಾರಸ್ಥರಿಗೆ ಸಾಲ ಸೌಭ್ಯವನ್ನು ಒದಗಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ವರ್ಷದ ವ್ಯಕ್ತಿ ಎಂದು ಗುರುತಿಸಿ ಸನ್ಮಾನಿಸಲಾಯಿತು. ಸಿಂಧನೂರಿನ ರಾಜಶೇಖರ, ಬ್ಯಾಂಕಿನ ಕಾ.ನಿ. ಅಧಿಕಾರಿ ಶಂಕರಾನಂದ, ನಿರ್ದೇಶಕರಾದ ಅಮರಗುಂಡಪ್ಪ ಮೇಟಿ, ಶಿವಯ್ಯಸ್ವಾಮಿ, ಎಚ್‌.ಎಂ.ಬಸವರಾಜಪ್ಪಗೌಡ, ಅಶೋಕಕುಮಾರ ಎಚ್‌.ಎಂ., ವಿಶ್ವಾರಾಧ್ಯಸ್ವಾಮಿ, ಆರ್‌. ರಾಘವೇಂದ್ರ ಶೆಟ್ಟಿ, ಎಚ್‌. ಸೂಗಪ್ಪಗೌಡ, ಆರ್‌. ಪಾಂಡುರಂಗ ಶೆಟ್ಟಿ, ಆರ್‌. ನಾಗರಾಜ ಶೆಟ್ಟಿ, ಚನ್ನಪ್ಪಗೌಡ, ಕೃಪಾಸಾಗರ ಪಾಟೀಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next