Advertisement

ವಿವಾದ ಮಾಡುತ್ತೀರಾ?:ಮಾಧ್ಯಮದವರ ಮೇಲೆ ಗರಂ ಆದ ಸಿದ್ದರಾಮಯ್ಯ

05:15 PM Mar 26, 2022 | Team Udayavani |

ಮೈಸೂರು: ನೀವೆ ಪ್ರಶ್ನೆ ಕೇಳಿ, ನೀವೆ ವಿವಾದ ಮಾಡುತ್ತೀರಾ ಎಂದು ವಿಧಾನಸಭೆ ಪ್ರತಿ ಪಕ್ಷ ನಾಯಕ  ಸಿದ್ದರಾಮಯ್ಯ ಅವರು ಶನಿವಾರ ಮಾಧ್ಯಮ ಪ್ರತಿನಿಧಿಗಳ ಮೇಲೆ ಗರಂ ಆಗಿದ್ದಾರೆ.

Advertisement

ನಾನು ಸ್ವಾಮೀಜಿಗಳ ಬಗ್ಗೆ ಶುಕ್ರವಾರ ಅಗೌರವವಾಗಿ ಮಾತನಾಡಿಲ್ಲ, ನಾನು ನಿನ್ನೆ ಹಿಜಾಬ್ ಪದವೇ ಬಳಸಿಲ್ಲ.ಹಿಜಾಬ್ ಗೂ ದುಪ್ಪಟಕ್ಕೂ ವ್ಯತ್ಯಾಸ ಗೊತ್ತಿಲ್ವಾ ನಿಮಗೆ.? ಎಂದು ಪ್ರಶ್ನಿಸಿದರು.

ಹಿಜಾಬೇ ಬೇರೆ, ದುಪ್ಪಟವೇ ಬೇರೆ. ಜನ ಸಾರ್ವಜನಿಕವಾಗಿ ಯಾವ ಯಾವ ವಸ್ತ್ರ ಬಳಸುತ್ತಾರೆಂದು ಹೇಳಿದ್ದೇನೆ.ಇದನ್ನು ಯಾವುದಕ್ಕೋ ನೀವು ಲಿಂಕ್ ಮಾಡಿ ವಿವಾದ ಸ್ಪಷ್ಠಿಸಿದ್ದೀರಿ. ನನಗೆ ಹಿಂದಿನಿಂದಲೂ ಸ್ವಾಮೀಜಿಗಳ ಮೇಲೆ ಅಪಾರ ಗೌರವ ವಿದೆ. ನಾನು ಮಠಗಳ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ದುಪ್ಪಟ ಹಾಕಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕೊಡಿ ಅಂತ ಕೇಳಿದ್ದೇನೆ.ನಾನು ಸಮವಸ್ತ್ರದ ವಿರೋಧಿ ಅಲ್ಲ.ಸಮವಸ್ತ್ರದ ಜೊತೆ ಅದೇ ಬಣ್ಣದ ದುಪ್ಪಟಕ್ಕೆ ಅವಕಾಶ ನೀಡಿ ಅಂತ ಕೇಳಿದ್ದೇನೆ. ಇದರಲ್ಲಿ ತಪ್ಪೇನಿದೆ.ನಾನು ಸಲಹೆ ಕೊಟ್ಟಿದ್ದೇನೆ. ಸ್ವೀಕರಿಸುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಮಾಧ್ಯಮಗಳ ಪ್ರಶ್ನೆಗೆ ಗರಂ ಆಗಿಯೇ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next