Advertisement

ವಿವಾದಿತ ಸುತ್ತೋಲೆ: ಯುಡಿಎಫ್‌ ಪ್ರತಿಭಟನ ಮೆರವಣಿಗೆ

06:00 AM Sep 27, 2018 | |

ಕಾಸರಗೋಡು: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಎಸ್‌. ಶ್ರೀನಿವಾಸ್‌ ಅವರ ವಿವಾದಿತ ಸುತ್ತೋಲೆಯನ್ನು ಪ್ರತಿಭಟಿಸಿ ಯುಡಿಎಫ್‌ ಕಾರ್ಯಕರ್ತರು ಕಾಸರಗೋಡು ನಗರದಲ್ಲಿ ಮೆರವಣಿಗೆ ನಡೆಸಿದರು.

Advertisement

ಬೆದರಿಕೆಯ ಸುತ್ತೋಲೆ
ಸರಕಾರಿ ನೌಕರರಿಗೆ ಲಭಿಸಬೇಕಾದ ಹಕ್ಕು ಮತ್ತು ಸವಲತ್ತುಗಳು ಸರಕಾರದ ಔದಾರ್ಯವೆಂದು ಪ್ರಕಟಿಸಿದ ಸರಕಾರದ “ಸ್ಯಾಲರಿ ಚಾಲೆಂಜ್‌’ನ್ನು ವಿರೋಧಿಸಿದ ನೌಕರರನ್ನು    ಬೆದರಿಸುವ   ರೀತಿಯಲ್ಲಿ ಜಿಲ್ಲಾ  ಪೊಲೀಸ್‌  ವರಿಷ್ಠಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆಂದು ಯುಡಿಎಫ್‌ ನೇತಾರರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಬಸ್‌ ನಿಲ್ದಾಣ ಪರಿಸರದಿಂದ ಆರಂಭಿಸಿದ ಪ್ರತಿಭಟನೆ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. 
ಮೆರವಣಿಗೆಗೆ ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್‌, ಮುಸ್ಲಿಂ ಲೀಗ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್‌ ರಹಿಮಾನ್‌, ಶಾಸಕ ಎನ್‌.ಎ. ನೆಲ್ಲಿಕುನ್ನು, ಯುಡಿಎಫ್‌ ಜಿಲ್ಲಾ ಸಂಚಾಲಕ ಎ.ಗೋವಿಂದನ್‌ ನಾಯರ್‌, ಕೆ. ನೀಲಕಂಠನ್‌, ಎ.ಎಂ.ಕಡವತ್‌, ಮೂಸಾ ಬಿ. ಚೆರ್ಕಳ, ಕರುಣ್‌ ತಾಪ್ಪ ಮೊದಲಾದವರು ನೇತೃತ್ವ ನೀಡಿದರು.
 

Advertisement

Udayavani is now on Telegram. Click here to join our channel and stay updated with the latest news.

Next