Advertisement

Arrested: ಕಂಟ್ರ್ಯಾಕ್ಟರ್‌ ಅಪಹರಿಸಿ ಮೂರು ಕೋಟಿ ರೂ.ಗೆ ಬೇಡಿಕೆ; ಬಂಧನ

01:22 PM Oct 21, 2023 | Team Udayavani |

ಬೆಂಗಳೂರು: ಗುತ್ತಿಗೆದಾರನನ್ನು ಅಪಹರಿಸಿ 3 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಬಿಬಿಎಂಪಿ ಮಾಜಿ ಕಾರ್ಪೊರೆಟರ್‌ ಜಿ.ಕೆ.ವೆಂಕಟೇಶ್‌ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಜಿ.ಕೆ.ವೆಂಕಟೇಶ್‌ ಯಶವಂತಪುರ ವಾರ್ಡ್‌ನ ಮಾಜಿ ಕಾರ್ಪೊರೇಟರ್‌ ಆಗಿದ್ದಾರೆ.  ಯಶವಂತಪುರ ವಾರ್ಡ್‌ ಕಾಮಗಾರಿಯನ್ನು ಗುತ್ತಿಗೆದಾರರ ಚಂದ್ರು ಗುತ್ತಿಗೆ ಪಡೆದಿದ್ದರು. ಚಂದ್ರುಗೆ ಗುತ್ತಿಗೆ ಸಿಕ್ಕಿದ ಹಿನ್ನೆಲೆ ವೆಂಕಟೇಶ್‌ ಆಕ್ರೋಶಗೊಂಡಿದ್ದರು. ನಿನ್ನಿಂದ ಕೈ ತಪ್ಪಿರುವ ಕಾಮಗಾರಿ ಭರಿಸುವಂತೆ ಬೆದರಿಕೆ ಒಡ್ಡಿದ್ದರು. ಇದಕ್ಕೆ ಚಂದ್ರು ಕಿವಿಗೊಡದೆ ಇದ್ದಾಗ ಅ.18 ರಂದು ಸಹಚರರ ಜತೆಗೆ ಸೇರಿಕೊಂಡು ಚಂದ್ರುನನ್ನು ಅಪಹರಿಸಿ 3 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು. ಬಳಿಕ 3 ಕೋಟಿ ರೂ. ಚೆಕ್‌ ಪಡೆದು ಹಲ್ಲೆ ಮಾಡಿ ಬಿಡುಗಡೆ ಮಾಡಿದ್ದರು. ಈ ಕುರಿತು ಯಶವಂತಪುರ ಪೊಲೀಸ್‌ ಠಾಣೆಗೆ ಗುತ್ತಿಗೆದಾರ ಚಂದ್ರು ದೂರು ನೀಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next