Advertisement

ಮುಂದುವರಿದ ಮಳೆ-ಗಾಳಿ; ಧರೆಗುರುಳಿದ ಮರಗಳು

05:25 PM May 18, 2018 | Team Udayavani |

ಹುಬ್ಬಳ್ಳಿ: ನಗರದಲ್ಲಿ ಗುರುವಾರ ಸಂಜೆ ಮಳೆ ಸುರಿದಿದೆ. ರಾಜನಗರದಲ್ಲಿ ಬೃಹದಾಕಾರದ ಮರ ಹಾಗೂ ಒಂದು ವಿದ್ಯುತ್‌ ಕಂಬ ನೆಲಕ್ಕುರುಳಿದ ಪರಿಣಾಮ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು.

Advertisement

ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸಿ ವಿದ್ಯುತ್‌ ಪೂರೈಕೆಗೆ ವ್ಯವಸ್ಥೆ ಕಲ್ಪಿಸಿದರು. ಹಳೇ ಹುಬ್ಬಳ್ಳಿಯ ಕಮ್ಮಾರ ಸಾಲ್‌ ನಲ್ಲಿ ಮರ ನೆಲಕ್ಕುರುಳಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತೊಂಡಿತ್ತು.

ಬುಧವಾರ ಮಧ್ಯರಾತ್ರಿ ದೇಶಪಾಂಡೆ ಲೇಔಟ್‌ ಹಾಗೂ ಮಯೂರ ಎಸ್ಟೇಟ್‌ನಲ್ಲಿ ಬೃಹದಾಕಾರದ ಎರಡು ಮರಗಳು ನೆಲಕ್ಕುರುಳಿವೆ. ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದಿದ್ದರಿಂದ ಮೂರು ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದರಿಂದ ಸುತ್ತಲಿನ ಭಾಗದಲ್ಲಿ ಇಡೀ ರಾತ್ರಿ ಕತ್ತಲಿನಲ್ಲಿ ಕಾಲ ಕಳೆಯುವಂತಾಗಿತ್ತು.

ಬೆಳಗ್ಗೆ ಪಾಲಿಕೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು. ಹೆಸ್ಕಾಂ ಸಿಬ್ಬಂದಿ ಹೊಸ ಕಂಬಗಳನ್ನು ಅಳವಡಿಸಿ ವಿದ್ಯುತ್‌ ಸರಬರಾಜು ಆರಂಭಿಸಿದರು. ಆನಂದ ನಗರದಲ್ಲೂ ಗುರುವಾರ ರಾತ್ರಿ ಮರವೊಂದು ಮನೆ ಮೇಲೆ ಬಿದ್ದ ಪರಿಣಾಮ ಮೆಹಬೂಬ್‌ಸಾಬ್‌ ಬಂಗಡಿವಾಲೆ ಎಂಬುವರ ಮನೆಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next