Advertisement

ಸುರಕ್ಷತೆಗೆ ನಿರಂತರ ಸಂಪರ್ಕ: ಎಂ.ಬಿ. ಪಾಟೀಲ

09:20 AM Apr 23, 2019 | Team Udayavani |

ವಿಜಯಪುರ: “ಉಗ್ರರು ನಡೆಸಿರುವ ಬಾಂಬ್‌ ಸ್ಫೋಟದಲ್ಲಿ ಅಮಾಯಕರನ್ನು ಬಲಿ ಪಡೆದ ಕೃತ್ಯ ಅತ್ಯಂತ ಅಮಾನವೀಯ.

Advertisement

ದುರಂತದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಕುರಿತು ನಿಖರ ಮಾಹಿತಿ ಪಡೆಯಲು ರಾಜ್ಯ ಸರ್ಕಾರ ಕೇಂದ್ರದ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, “ಶಾಂತಿದೂತ ಏಸು ಕ್ರಿಸ್ತ ಅವರ ಈಸ್ಟರ್‌ ಹಬ್ಬದ ದಿನ ಅಮಾಯಕ ನಾಗರಿಕರನ್ನು ಗುರಿಯಾಗಿಸಿ ನಡೆಸಿರುವ ದಾಳಿ ಖಂಡನೀಯ. ದುರಂತದಲ್ಲಿ ಕರ್ನಾಟಕದ ನಾಗರಿಕರು ಸಿಲುಕಿ ಕೆಲವರು ಮೃತಪಟ್ಟಿದ್ದು, ಮತ್ತೆ ಕೆಲವರು ಗಾಯಗೊಂಡು ನಾಪತ್ತೆಯಾಗಿರುವ ಮಾಹಿತಿ ಇದೆ.

ದುರಂತದಲ್ಲಿ ಬೆಂಗಳೂರಿನ ದಾಸರಹಳ್ಳಿಯ 7 ಜನರು ಸಿಲುಕಿರುವ ಮಾಹಿತಿ ಇದೆ. ಇದು ಸೂಕ್ಷ್ಮ ವಿಚಾರ ಆಗಿರುವ ಕಾರಣ ಮಾಹಿತಿ ನೀಡುವ ಆತುರ ಮಾಡಲ್ಲ. ಲಭ್ಯ ಮಾಹಿತಿ ಪಡೆಯುತ್ತಿದ್ದೇವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next