Advertisement

ಹೆಸಕುತ್ತೂರು: ಮಹಿಳೆ ನಾಪತ್ತೆ ಮುಂದುವರಿದ ಶೋಧಕಾರ್ಯ

10:35 AM Sep 10, 2019 | Team Udayavani |

ತೆಕ್ಕಟ್ಟೆ : ಕುಂದಾಪುರ ತಾಲೂಕಿನ ಹೆಸ್ಕುತ್ತೂರು ಸರಕಾರಿ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ವಿಠಲ್ ಕುಲಾಲ್ ಅವರ ಸಹೋದರಿ ಕನಕ ಎನ್ನುವವರು ಕಳೆದ ರಾತ್ರಿ ಮನೆಯಿಂದ ಹೊರಗೆ ಹೋದವರು ಇನ್ನು ಕೂಡಾ ಮನೆಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮನೆಯವರು ಹೆಸ್ಕುತ್ತೂರು ಹೊಳೆಯಲ್ಲಿ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಸ್ಥಳಕ್ಕೆ ಕಂಡ್ಲೂರು ಪೊಲೀಸ್ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Advertisement

ಹೆಸ್ಕುತ್ತೂರು ಹೊಳೆಯ ಸುತ್ತ ಮುತ್ತ ಸ್ಥಳೀಯ ಜನರು ನೆರೆದಿದ್ದು ಹೊಳೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ ಬಗ್ಗೆ  ಶಂಕೆ ವ್ಯಕ್ತಪಡಿಸಲಾಗಿದೆ. ಪೊಲೀಸರು ಶೋಧ ಕಾರ್ಯವನ್ನು ಚರುಕುಗೊಳಿಸಿ ಸಂಬಂಧ ಪಟ್ಟ ಮಾಹಿತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next