Advertisement

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವೆ: ಬಸನಗೌಡ

02:27 PM Apr 19, 2022 | Team Udayavani |

ಸಿಂಧನೂರು: ಕ್ಷೇತ್ರದ ಜನರ ಆಶಯದ ಹಿನ್ನೆಲೆಯಲ್ಲಿ ನಾನು ಕೂಡ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಸ್ಪರ್ಧೆ ಖಚಿತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಹೇಳಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 49,644 ಡಿಜಿಟಲ್‌ ಸದಸ್ಯತ್ವ ಮಾಡಿಸಲಾಗಿದೆ. ನಮ್ಮ ಕಾರ್ಯಕರ್ತರು 41,152 ಸದಸ್ಯತ್ವ ಮಾಡಿಸಿದ್ದಾರೆ. ಇದು ಕೆಪಿಸಿಸಿಯಿಂದ ನೀಡಿರುವ ಅಧಿಕೃತ ಮಾಹಿತಿ ಎಂದರು.

ನಾನು ಕೂಡ ಸ್ಪರ್ಧಿಸುವೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಕೂಡ ಸಿದ್ಧ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯೂ ಕೂಡ. ಆದರೆ, ಟಿಕೆಟ್‌ ನೀಡುವ ಇಲ್ಲವೇ ಅಂತಿಮಗೊಳಿಸುವ ಕೆಲಸವನ್ನು ಹೈಕಮಾಂಡ್‌ ಮಾಡುತ್ತದೆ. ಈಗಾಗಲೇ ಆಯಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಯಾರ್ಯಾರು ಏನೇನು ಚಟುವಟಿಕೆ ಮಾಡಿದ್ದಾರೆಂಬುದನ್ನು ಹೈಕಮಾಂಡ್‌ ಗಮನಿಸುತ್ತಿದೆ. ಅಧ್ಯಯನ ನಡೆಸಿಯೇ ಟಿಕೆಟ್‌ ಅಂತಿಮಗೊಳಿಸುತ್ತಾರೆ ಎಂದರು.

ಹೈಕಮಾಂಡ್‌ ವಿಶ್ವಾಸ ಕಾರಣ

Advertisement

ನನ್ನನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವ ಪಕ್ಷದ ಎಐಸಿಸಿ ನಾಯಕರು, ಕೆಪಿಸಿಸಿ ಮುಖಂಡರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಈ ಮೊದಲು ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷನಾಗಿ ಮಾಡಿರುವ ಕೆಲಸವನ್ನು ಗುರುತಿಸಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಶಿವಕುಮಾರ ಜವಳಿ, ಎಚ್‌.ಎನ್‌. ಬಡಿಗೇರ, ಶರಣಯ್ಯಸ್ವಾಮಿ ಕೋಟೆ, ವೆಂಕಟೇಶ ರಾಗಲಪರ್ವಿ, ಯೂನೂಸ್‌ಪಾಷಾ ದಢೇಸುಗೂರು ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next