Advertisement

ಲಾಕ್‌ಡೌನ್‌ ಅವಧಿಯ ಸದುಪಯೋಗ: ಇರಾ ಗ್ರಾ.ಪಂ.ವ್ಯಾಪ್ತಿಯಲ್ಲಿ 12 ಬಾವಿ ನಿರ್ಮಾಣ

09:28 AM May 29, 2020 | mahesh |

ಬಂಟ್ವಾಳ: ಸ್ವಚ್ಛತೆ, ಸಾಕ್ಷರತೆಯಲ್ಲಿ ವಿಶೇಷ ಸಾಧನೆ ಮಾಡಿರುವ ಇರಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಇದೀಗ ಜಲ ಸಾಕ್ಷರತೆಯ ಭಾಗವಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮೂಲಕ ಒಟ್ಟು 12 ತೆರೆದ ಬಾವಿಗಳನ್ನು ರಚನೆ ಮಾಡಲಾಗಿದೆ.

Advertisement

ಸ್ವಾವಲಂಬನೆ ಉದ್ದೇಶ
ಕೋವಿಡ್‌-19ರ ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲೇ ಇದ್ದ ಜನರಿಗೆ ಉದ್ಯೋಗ ಖಾತರಿ ಯೋಜನೆಯ ಕುರಿತು ತಿಳಿವಳಿಕೆ ಮೂಡಿಸಿ ತಮ್ಮ ಸ್ವಂತ ಜಮೀನಿನಲ್ಲಿ ಕುಡಿಯುವ ನೀರಿನ ಬಾವಿ ಕೊರೆಯುವವರಿಗೆ ಯೋಜನೆಯಲ್ಲಿ ಅನುದಾನ ನೀಡುವುದಾಗಿ ಗ್ರಾಮ ಪಂಚಾಯತ್‌ ತಿಳಿಸಿತ್ತು. ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಇದ್ದರೂ ಸ್ವಾವಲಂಬಿಗಳಾಗಲು ಬಹಳಷ್ಟು ಮಂದಿ ಬಾವಿ ಕೊರೆಯುವುದಕ್ಕೆ ಮುಂದೆ ಬಂದಿದ್ದರು. ತಮ್ಮ ತಮ್ಮ ಮನೆಗಳ ಬಳಿ ತೆರೆದ ಬಾವಿಗಳನ್ನು ತೋಡುವ ಕೆಲಸವನ್ನು ಆರಂಭಿಸಿದರು.  ಅಂತರ್ಜಲ ವೃದ್ಧಿಗೆ ಯೋಜನೆ ಮೂರನೇ ಹಂತದ ಲಾಕ್‌ಡೌನ್‌ ಅವಧಿ ಮುಗಿಯುವ ಹೊತ್ತಿಗೆ ಗ್ರಾಮದಲ್ಲಿ 12 ಹೊಸ ಬಾವಿಗಳ ಕೆಲಸ ಪೂರ್ಣಗೊಂಡಿದೆ. ಪ್ರಸ್ತುತ ಗ್ರಾಮಸ್ಥರು ಅದೇ ಬಾವಿಗಳ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ. ಮುಂದೆ ಮಳೆಗಾಲದಲ್ಲಿ ತಮ್ಮ ಮನೆಯ ಮಾಡಿಗೆ ಬೀಳುವ ಮಳೆ ನೀರನ್ನು ಈ ಬಾವಿಯ ಮೂಲಕ ಸಂಗ್ರಹಿಸಿ ಅಂತರ್ಜಲ ವೃದ್ಧಿಗೂ ಇವರನ್ನು ತೊಡಗಿಸಿಕೊಳ್ಳಲು ಪ್ರೇರಣೆ ನೀಡುವ ಕೆಲಸವನ್ನು ಗ್ರಾಮ ಪಂಚಾಯತ್‌ ಮಾಡುತ್ತಿದೆ.

ಗ್ರಾಮ ಪಂಚಾಯತ್‌ ಅಧ್ಯಕ್ಷ ಅಬ್ದುಲ್‌ ರಝಾಕ್‌ ಕುಕ್ಕಾಜೆ, ಉಪಾ ಧ್ಯಕ್ಷೆ ಚಂದ್ರಾವತಿ ಎ. ಕರ್ಕೇರ, ಪಿಡಿಒ ಸುಶೀಲಾ, ಕಾರ್ಯದರ್ಶಿ ನಳಿನಿ ಎ.ಕೆ., ಎಂಜಿನಿಯರ್‌ ನಳಿನಾಕ್ಷಿ, ಗ್ರಾ.ಪಂ.ಸದಸ್ಯರು, ಸಿಬಂದಿ ಮೊದಲಾದವರು ಗ್ರಾಮಸ್ಥರಿಗೆ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ನೀಡಿದ್ದರು. ಅದೀಗ ಫ‌ಲ ಕೊಟ್ಟಿದ್ದು, ಗ್ರಾಮಸ್ಥರು ಬಾವಿ ತೋಡಿ ಸಾಧನೆ ಮಾಡಿದ್ದಾರೆ.

10 ಬಾವಿಗಳ ಗುರಿ
ಗ್ರಾ.ಪಂ.ಗೆ 10 ಬಾವಿಗಳ ಗುರಿಯನ್ನು ನೀಡಲಾಗಿದ್ದು, ಅದರಂತೆ ಬಾವಿ ಕೊರೆಯುವು ದಕ್ಕೆ ಉತ್ತೇಜನ ನೀಡಲಾಗಿದೆ. ಇದರಿಂದ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ. ಬಾವಿಯ ಆಳ, ಅಗಲದ ಆಧಾರದಲ್ಲಿ ಉದ್ಯೋಗ ಖಾತರಿ ಯೋಜನೆಯಿಂದ ಅನುದಾನ ಸಿಗಲಿದೆ. – ಸುಶೀಲಾ, ಇರಾ ಗ್ರಾ.ಪಂ. ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next