Advertisement

Bengaluru: ಇನ್‌ಸ್ಪೆಕ್ಟರ್‌ ಹಾಗೂ ಎಸಿಪಿಯನ್ನು ಕೊಲೆ ಮಾಡುವುದಾಗಿ ಕಾನ್‌ಸ್ಟೇಬಲ್ ಬೆದರಿಕೆ

10:53 AM May 22, 2024 | Team Udayavani |

ಬೆಂಗಳೂರು: ಪ್ರಕರಣವೊಂದರಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಅಮಾನತಿಗೆ ಶಿಪಾರಸು ಮಾಡಿದ ಇನ್‌ಸ್ಪೆಕ್ಟರ್‌ ಹಾಗೂ ಎಸಿಪಿಗೆ ಕಾನ್‌ಸ್ಟೇಬಲ್ ವೊಬ್ಬರು ಬೆದರಿಕೆ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ. ‌

Advertisement

ಇತ್ತೀಚೆಗೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್‌ ಕಾರ್ತಿಕೇಯನ್‌ ಎಂಬಾತನ ಹತ್ಯೆಯಾಗಿತ್ತು. ಈ ಕೃತ್ಯಕ್ಕೆ ಹಳೇ ದ್ವೇಷವೇ ಕಾರಣ ಎಂಬುದು ಗೊತ್ತಾಗಿತ್ತು. ಪ್ರಕರಣದಲ್ಲಿ ಮಂಜು ಹಾಗೂ ಆತನ ಸಹಚರರರನ್ನು ಬಂಧಿಸಲಾಗಿತ್ತು.

ಮತ್ತೂಂದೆಡೆ ಆರೋಪಿ ಮಂಜು ಹಾಗೂ ಕಾರ್ತಿಕೇಯನ್‌ ನಡುವೆ ಹಳೇ ದ್ವೇಷ ಇದೆ ಎಂಬುದು ಠಾಣೆಯ ಕ್ರೈಂ ಸಿಬ್ಬಂದಿಗೆ ಮಾಹಿತಿ ಇತ್ತು. ಆದರೂ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಹಾಗೂ ಎಸಿಪಿ ಶಿಫಾರಸಿನ ಮೇರೆಗೆ ಠಾಣೆಯ ಕಾನ್‌ಸ್ಟೇಬಲ್ ಗ‌ಳಾದ ಸಂತೋಷ್‌, ಪುಟ್ಟಸ್ವಾಮಿ ಮತ್ತು ವಿನೋದ್‌ ಅವರನ್ನು ಪೂರ್ವವಿಭಾಗದ ಡಿಸಿಪಿ ಅಮಾನತು ಮಾಡಿದ್ದರು. ಈ ಮಧ್ಯೆ ಮತ್ತೂಬ್ಬ ಕಾನ್‌ಸ್ಟೆಬಲ್‌ ರೇಣುಕಾ ನಾಯಕ್‌ ಎಂಬುವರ ಅಮಾನತಿಗೂ ಪಿಐ ಮತ್ತು ಎಸಿಪಿ ಶಿಫಾರಸು ಮಾಡಿದ್ದರು. ಈ ವಿಚಾರ ತಿಳಿದ ಕಾನ್‌ಸ್ಟೇಬಲ್, ಪಿಐ ಮತ್ತು ಎಸಿಪಿಗೆ ಕರೆ ಮಾಡಿ, ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದರಿಂದ ವಿಚಲಿತಗೊಂಡ ಪಿಐ ಮತ್ತು ಎಸಿಪಿ ಶಿಫಾರಸು ಪತ್ರವನ್ನು ವಾಪಸ್‌ ಪಡೆದುಕೊಂಡಿದ್ದರು. ಅಲ್ಲದೆ, ಕಾನ್‌ಸ್ಟೇಬಲ್ ರೇಣುಕಾ ನಾಯಕ್‌ಗೆ 1 ತಿಂಗಳ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

ಈ ವಿಚಾರ ತಿಳಿದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ಪೊಲೀಸ್‌ ಇಲಾಖೆಯಲ್ಲಿ ಅಶಿಸ್ತು ಸಹಿಸುವುದಿಲ್ಲ. ಹಿರಿಯ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಸರಿಯಲ್ಲ. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ಆದೇಶಿಸಿದ್ದಾರೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next