Advertisement

ಗೋರಕ್ಷಣೆ: ಕರ್ನಾಟಕ ಸೇರಿ 11 ರಾಜ್ಯಗಳ ಸಭೆ

08:25 AM Dec 12, 2017 | Team Udayavani |

ಹೊಸದಿಲ್ಲಿ: ಸದ್ಯಕ್ಕೆ ಅವನತಿಯ ಅಂಚಿನಲ್ಲಿರುವ ಭಾರತೀಯ ಮೂಲದ ಗೋವುಗಳ ತಳಿ ಸಂರಕ್ಷಣೆಗಾಗಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ), ಮಂಗಳವಾರ (12ರಂದು) ಕರೆದಿರುವ ಸಭೆಯಲ್ಲಿ ಕರ್ನಾಟಕ ಸೇರಿ ಹನ್ನೊಂದು ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

Advertisement

ಎನ್‌ಜಿಟಿಯ ಮುಖ್ಯಸ್ಥರಾಗಿರುವ ನ್ಯಾ.ಸ್ವತಂತ್ರ ಕುಮಾರ್‌ ಅವರುಳ್ಳ ನ್ಯಾಯಪೀಠ, ಸಭೆಗೆ ಸಂಬಂಧಿಸಿದಂತೆ ಕರ್ನಾಟಕ, ಮೇಘಾಲಯ, ಪಶ್ಚಿಮ ಬಂಗಾಲ, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಜಮ್ಮು- ಕಾಶ್ಮೀರ, ಜಾರ್ಖಂಡ್‌, ಮಿಜೋರಾಂ, ಸಿಕ್ಕಿಂ ಹಾಗೂ ತ್ರಿಪುರಾಸರಕಾರಗಳಿಗೆ ತಾಕೀತು ಮಾಡಿದೆ. ಇದಲ್ಲದೆ, ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೂ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಅದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next