Advertisement

ಕಾಂಗ್ರೆಸ್‌ನ ಕನಿಷ್ಠ ಆದಾಯ ಸ್ಕೀಮ್‌ ಚುನಾವಣಾ ಗಿಮಿಕ್‌: ಯೋಗಿ ಆದಿತ್ಯನಾಥ್‌

09:20 AM Mar 29, 2019 | Sathish malya |

ಗೋರಖ್‌ಪುರ : ‘ಕಾಂಗ್ರೆಸ್‌ ಪಕ್ಷದ ಕನಿಷ್ಠ ಆದಾಯ ಯೋಜನೆ ಕೇವಲ ಒಂದು ಚುನಾವಣಾ ಗಿಮಿಕ್‌ ‘ ಎಂದು ಟೀಕಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಎಸ್‌ ಪಿ ಮತ್ತು ಬಿಎಸ್‌ಪಿ ಜತೆಗೂಡಿ ಕಾಂಗ್ರೆಸ್‌ ಪಕ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ತಡೆಯುತ್ತಾ ಬಂದಿದೆ ಎಂದು ಆರೋಪಿಸಿದ್ದಾರೆ.

Advertisement

”ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್‌ ಪಕ್ಷ ಗರೀಬೀ ಹಠಾವೋ ಘೋಷಣೆಯನ್ನು ನೀಡಿತ್ತು. ಈಗ ಬಡವರಲ್ಲಿ ಕಡು ಬಡವರಿಗೆ ವರ್ಷಕ್ಕೆ 72,000 ರೂ. ಕನಿಷ್ಠ ಆದಾಯ ಒದಗಿಸುವುದಾಗಿ ಘೋಷಿಸಿರುವುದು ಚುನಾವಣಾ ಗಿಮಿಕ್‌” ಎಂದು ಆದಿತ್ಯನಾಥ್‌ ಅವರು ವಿಜಯ ಸಂಕಲ್ಪ ರಾಲಿಯಲ್ಲಿ ಭಾಷಣ ಮಾಡಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಕ್ಕಿರುವ ಅತೀ ದೊಡ್ಡ ಅಡೆತಡೆ ಎಂದರೆ ಕಾಂಗ್ರೆಸ್‌, ಎಸ್‌ಪಿ ಮತ್ತು ಬಿಎಸ್‌ಪಿ; ಕಾಂಗ್ರೆಸ್‌ ಪಕ್ಷವಂತೂ ರಾಮ ಮಂದಿರ ನಿರ್ಮಾಣ ತಡೆಯುವ ನಿಟ್ಟಿನಲ್ಲಿ ವಕೀಲರ ದೊಡ್ಡ ಸೇನೆಯನ್ನೇ ಮುಂದೆ ತಂದಿದೆ ಎಂದು ಆದಿತ್ಯನಾಥ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next