Advertisement

ಮೀನಕಳಿಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

11:18 AM Nov 13, 2017 | Team Udayavani |

ಬೈಕಂಪಾಡಿ: ಮೀನಕಳಿಯ ಪ್ರದೇಶದಲ್ಲಿನ ಅಭಿವೃದ್ಧಿಗೆ ಕಾಂಗ್ರೆಸ್‌ ಹೆಚ್ಚಿನ ಕೊಡುಗೆ ನೀಡಿದೆ ಎಂದು ಮಾಜಿ ಉಪಮೇಯರ್‌ ಬಶೀರ್‌ ಬೈಕಂಪಾಡಿ ಹೇಳಿದರು.

Advertisement

ಮೀನಕಳಿಯದಲ್ಲಿ ರವಿವಾರ ಆಯೋಜಿಸಲಾದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಶಾಸಕ ಮೊಯಿದಿನ್‌ ಬಾವಾ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ದಾಖಲೆಯ ಅನುದಾನ ತಂದಿದ್ದು, ಸಮುದ್ರ ತೀರದುದ್ದಕ್ಕೂ ತಡೆಗೋಡೆ ಸಹಿತ ಅಭಿವೃದ್ಧಿ ಕೆಲಸಗಳಾಗಲಿವೆ ಎಂದರು.

ಪಟೇಲ್‌ ಶ್ರೀನಿವಾಸ ರಾವ್‌ ಮಾತನಾಡಿ, ಕಾಂಗ್ರೆಸ್‌ನ ಹಸ್ತ ಚಿಹ್ನೆ ಶುಭ ಸೂಚಕವಾಗಿದೆ. ಬೆಳಗ್ಗೆದ್ದು ಎರಡೂ ಕೈಗಳನ್ನು ಮುಗಿದು ಕೆಲಸ ಆರಂಭಿಸಿದರೆ ಮಂಗಳವಾಗುವಂತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಜನಪರವಾದ ಕೆಲಸ ಮಾಡಿದೆ ಎಂದರು.

ಪಣಂಬೂರು ವಾರ್ಡ್‌ ಅಧ್ಯಕ್ಷ ಹರೀಶ್‌ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಮೊದಿನ್‌ ಬಾವಾ, ರಾಜ್ಯ ಕಾಂಗ್ರೆಸ್‌ ಕಾರ್ಯದರ್ಶಿ ಪ್ರತಿಭಾ ಕುಳಾಯಿ, ಶ್ಯಾಮ್‌ ರಾಯ್‌ ಸುವರ್ಣ, ಹೇಮಚಂದ್ರ ಪೂಜಾರಿ, ಶ್ರೀಕಾಂತ್‌ ಸಾಲ್ಯಾನ್‌, ಮಹಮ್ಮದ್‌ ಅಲಿ ಕೂಳೂರು, ಉಪಾಧ್ಯಕ್ಷ ಜೀವನ್‌ ತಣ್ಣೀರು ಬಾವಿ,ನಾಗೇಶ್‌ ಸಾಲ್ಯಾನ್‌, ನವೀನ್‌ ಸಾಲ್ಯಾನ್‌, ಪ್ರಧಾನ ಕಾರ್ಯದರ್ಶಿ ಗಿರೀಶ್‌ ಸುವರ್ಣ, ಪೆರ್ಮಾಳ್‌ ಕುಟ್ಟಿ, ಧರ್ಮೇಶ್‌ ಅಮೀನ್‌, ಮಂಜುಳಾ ಕೂರಿ ಕಟ್ಟ, ಸುಕೇತ್‌ ಬಂಗೇರ, ಶಶಿ ಅಮೀನ್‌, ಪ್ರೇಮಾ ಪುತ್ರನ್‌, ಸವಿತಾ ಕೂರಿಕಟ್ಟ, ಬಿಂದೂ, ಜೀತು ಪುತ್ರನ್‌, ಕಾರ್ತಿಕ್‌ , ಪ್ರಮೋದ್‌ ಕುಳಾಯಿ, ರಘು ಕೂರಿಕಟ್ಟ, ಮೋಹನ್‌ ಕೂರಿಕಟ್ಟ, ಪಾಂಡಿ, ರಾಮ ಕೂರಿಕಟ್ಟ, ಡಾ| ಭಾಸ್ಕರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next