Advertisement

ಮುಸ್ಲಿಂ‌ ಜನಾಂಗ ತಪ್ಪು ಮಾಡಿದರೆ ಕಾಂಗ್ರೆಸ್ ಮಾತನಾಡುವುದಿಲ್ಲ: ಶೆಟ್ಟರ್

09:26 PM Apr 24, 2022 | Team Udayavani |

ಬೆಂಗಳೂರು : ಮುಸ್ಲಿಂ‌ ಜನಾಂಗ ತಪ್ಪು ಮಾಡಿದರೆ ಕಾಂಗ್ರೆಸ್ ಮಾತನಾಡುವುದಿಲ್ಲ ಎಂದು ಭಾನುವಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

Advertisement

ಉತ್ತರ ಜಿಲ್ಲಾ ಕೋರ್ ಕಮಿಟಿ ಸಭೆಯ ನಂತರ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಕಳೆದ 25 ವರ್ಷಗಳಿಂದ ಸೌಹಾರ್ದಯುತ ವಾತಾವರಣ ಇದೆ. ಮೊನ್ನೆ ನಡೆದ ಘಟನೆ ಪೂರ್ವ ನಿಯೋಜಿತ, ಹೊರಗಿನ ವ್ಯಕ್ತಿಗಳ ಕೈವಾಡ ಇದೆ ಎಂದರು.

ಕಾಂಗ್ರೆಸ್ ನವರ ಅಲ್ಪಸಂಖ್ಯಾತರ ತುಷ್ಟೀಕರಣ ಘಟನೆಗೆ ಪ್ರಚೋದನೆ ಆಗಿದೆ. ಮುಸ್ಲಿಂ‌ ಜನಾಂಗ ತಪ್ಪು ಮಾಡಿದರೆ ಕಾಂಗ್ರೆಸ್ ಮಾತನಾಡುವುದಿಲ್ಲ. ಪೊಲೀಸರು ಬಹಳ ಜನರನ್ನು ಬಂಧಿಸಿದ್ದಾರೆ. ಬಂಧಿತರ ಬಗ್ಗೆಯೂ ಕಾಂಗ್ರೆಸ್ ನವರು ಅವರು ಮುಗ್ಧರು ಅನ್ನುತ್ತಾರೆ.ಇದು ಅವರ ತುಷ್ಟೀಕರಣ ನೀತಿ ಎಂದರು.

ಯಾರೂ ಪ್ರಚೋದನೆ ಮಾಡಬಾರದು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ‌ ಆಗಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next