Advertisement

“ಕಾಂಗ್ರೆಸ್‌ ಬಿಡಲ್ಲ,ಬಿಜೆಪಿಗೆ ಹೋಗಲ್ಲ’

12:09 AM Jul 12, 2019 | Team Udayavani |

ಸಾವಳಗಿ: ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡುವುದಿಲ್ಲ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಸ್ಪಷ್ಟಪಡಿಸಿದ್ದಾರೆ.

Advertisement

ಅತೃಪ್ತ ಬಣದಲ್ಲಿ ಸೇರಿಕೊಳ್ಳುತ್ತಾರೆಂಬ ವದಂತಿಗೆ ಶಾಸಕರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನ್ನ ಬಗ್ಗೆ ಕೆಲ ಮಾಧ್ಯಮಗಳು ಸುಳ್ಳು ಸುದ್ದಿ
ಹಬ್ಬಿಸುತ್ತಿದ್ದು. ಇದರಿಂದ ಬೇಸರವಾಗಿದೆ. ನನ್ನ ಕ್ಷೇತ್ರದ ಜನ ನನ್ನ ಮೇಲೆ ಅಪಾರ ನಂಬಿಕೆಯಿಂದ 40 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಅವರ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ರಾಜಕೀಯ ಗೊಂದಲದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕ್ಷೇತ್ರದ ಜನತೆ ನನ್ನ ಪಾಲಿನ ದೇವರು. ಅವರ ಆಶಯದಂತೆ ನನ್ನ ಕ್ಷೇತ್ರದಲ್ಲಿ ಹಸಿರು ಜಮಖಂಡಿ ಮತ್ತು ಸ್ವತ್ಛ ಜಮಖಂಡಿ ಅಭಿಯಾನದಲ್ಲಿ ಭಾಗಿಯಾಗಿ ಸಸಿ ನೆಡುವ
ಕಾರ್ಯಕ್ರಮದಲ್ಲಿ ನಿರತನಾಗಿದ್ದೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next