Advertisement

ಬಿಜೆಪಿ ಸುನಾಮಿಗೆ ಕಾಂಗ್ರೆಸ್‌ ಧೂಳಿಪಟ

01:23 PM May 05, 2018 | |

ತಾಳಿಕೋಟೆ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಬ್ರಿಟಿಷರ ಹಾಗೆ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸುನಾಮಿ ಅಲೆಗೆ ಧೂಳಿಪಟವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು.

Advertisement

ಪಟ್ಟಣದ ಬಸವೇಶ್ವರ ಮಾರ್ಕೆಟ್‌ ಯಾರ್ಡ್‌ನಲ್ಲಿ ಚುನಾವಣಾ ಪ್ರಚಾರಾರ್ಥ ನಡೆದ ಭಹಿರಂಗ ಸಭೆಯಲ್ಲಿ ಅವರು
ಮಾತನಾಡಿದರು. 25 ವರ್ಷಗಳಿಂದ ಮುದ್ದೇಬಿಹಾಳ ಕ್ಷೇತ್ರವನ್ನು ಆಳ್ವಿಕೆ ಮಾಡಿರುವ ಸಿ.ಎಸ್‌. ನಾಡಗೌಡರು ಜನರ ಎದುರಿಗೆ ಅಭಿವೃದ್ಧಿ ಕುರಿತು ಮಾತನಾಡಲು ನೈತಿಕತೆ ಉಳಿಸಿಕೊಂಡಿಲ್ಲ. ಕ್ಷೇತ್ರದಲ್ಲಿಯ ಯಾವುದೇ ಒಂದು ಸಣ್ಣ ಸಮಾಜಕ್ಕೆ ಯಾವುದೇ ಕೊಡುಗೆಗಳನ್ನು ನೀಡಿಲ್ಲ. ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಶೈಕ್ಷಣಿಕವಾಗಿಯೂ ಯಾವುದೇ ಅಭಿವೃದ್ದಿ ಮಾಡಿಲ್ಲ ಎಂದರು.

ಈ ಭಾಗದಲ್ಲಿರುವ ಎಲ್ಲ ರೈತರು ಮಳೆ ಕೊರತೆಯನ್ನು ಎದುರಿಸುತ್ತ ಸಾಗಿದ್ದಾರೆ. ಕೇವಲ 30 ಕಿ.ಮೀ. ಅಂತರದಲ್ಲಿ ನಾರಾಯಣಪುರ ಡ್ಯಾಂ ಇದ್ದರೂ ಕೂಡಾ ನಾಡಗೌಡರಿಂದ ನೀರಾವರಿ ಮಾಡಲು ಸಹ ಆಗಿಲ್ಲ. ಆದರೆ ನಾನು ದೇವರಹಿಪ್ಪರಗಿ ಕ್ಷೇತ್ರದಲ್ಲಿ ಫಿರಾಪುರ-ಬೂದಿಹಾಳ ಏತ ನೀರಾವರಿ ಯೋಜನೆ ರೂಪಿಸಿ ಅನುಷ್ಠಾನಗೊಳಿ ರೈತರ ಕಷ್ಟಕ್ಕೆ ಸ್ಪಂದಿಸುವಂತಹ ಕಾರ್ಯ ಮಾಡಿದ್ದೇನೆ. 

ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇನೆ. ಸುಮಾರು 4 ಸಾವಿರ ಜನರಿಗೆ ಸಾಮೂಹಿಕ ವಿವಾಹ ಮಾಡಿದ್ದೇನೆ.
 
ನಾನು ಶ್ರೀಮಂತರಿಗಿಂತ ಅತಿಯಾಗಿ ಪ್ರೀತಿಸುವುದು ಬಡವರನ್ನು. ಆ ಬಡವರು ನನ್ನ ಮನೆಗೆ ಬಂದಾಗ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತ ಬಂದಿದ್ದೇನೆ. ನಾಡಗೌಡರು ಬಡವರಿಗಾಗಿ, ದೀನ ದಲಿತರಿಗಾಗಿ, ತಾಲೂಕಿನ ಅಭಿವೃದ್ಧಿಗಾಗಿ ಯಾವ ಕೊಡೆಗೆಗಳನ್ನು ನೀಡಿದ್ದಾರೆಂಬುದನ್ನು ಯೋಚಿಸಿ ನೋಡಿದರೆ ಎಲ್ಲದರಲ್ಲಿಯೂ ಅವರು ಶೂನ್ಯ ಸಾಧನೆ ಮಾಡಿದ್ದಾರೆ. ಇಂತಹ ಬ್ರಿಟಿಷರ ಸಂಸ್ಕೃತಿ ಹೊಂದಿರುವ ಕಾಂಗ್ರೆಸ್‌ ಪಕ್ಷವನ್ನು ಮೇ 12ರಂದು ಅಬ್ಬರಿಸಲಿರುವ ಬಿಜೆಪಿ ಸುನಾಮಿಯ ಅಲೆಗೆ ಧೂಳಿಪಟ ಮಾಡಲು ಎಲ್ಲ ವರ್ತಕ ಬಂಧುಗಳು, ಕಾರ್ಯಕರು ಬಿಜೆಪಿಗೆ ಮತ ನೀಡುವ ಮೂಲಕ ಬೆಂಬಲಿಸಬೇಕೆಂದರು.
 
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌. ಎಸ್‌. ಪಾಟೀಲ (ಕೂಚಬಾಳ) ಮಾತನಾಡಿ, ದೇಶದೆಲ್ಲೆಡೆ ಬದಲಾವಣೆ ಗಾಳಿ ಬೀಸುತ್ತಿದೆ. ನರೇಂದ್ರ ಮೋದಿಜಿ ಅವರ ನೇತೃತ್ವದ ಸರ್ಕಾರ ಒಳ್ಳೆ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಚುನಾವಣೆಗೆ ಮುದ್ದೇಬಿಹಾಳ ಕ್ಷೇತ್ರದಿಂದ ಎ.ಎಸ್‌. ಪಾಟೀಲ (ನಡಹಳ್ಳಿ) ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ. ಎಲ್ಲ ಸಂಘಟಕರು ಅವರಿಗೆ ಬೆಂಬಲಿಸಬೇಕೆಂದು ಹೇಳಿದರು.

 ಎ.ಎಸ್‌. ಪಾಟೀಲ (ನಡಹಳ್ಳಿ) ಬಗ್ಗೆ ಇಲ್ಲ ಸಲ್ಲದ ಉಹಾಪೋಹಗಳನ್ನು ಕೆಲವರು ಎಬ್ಬಿಸುತ್ತಿದ್ದು ಅದಕ್ಕೆ ಯಾರು ಕಿವಿ ಗೊಡಬಾರದು. ನಡಹಳ್ಳಿ ಅವರು ಅಭಿವೃದ್ಧಿಗಾಗಿ ಹೋರಾಟಗಳನ್ನು ಮಾಡಿಯಶಸ್ಸನ್ನೂ ಕಂಡಿದ್ದಾರೆ. ಆದರೆ ನಾಡಗೌಡರು ಅಭಿವೃದ್ಧಿ ವಿಷಯದಲ್ಲಿ ಹೋರಾಟ ಮಾಡಿಲ್ಲ. ಕೇವಲ ಹಿಂಬಾಲಕರಿಗೆ ಮಣೆ ಹಾಕಿ ಅವರನ್ನು ಶ್ರೀಮಂತರನ್ನಾಗಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ದೇಶದ ಸಂಸ್ಕೃತಿ ನಾಶ ಮಾಡಲು ಹೊರಟಿದೆ. ಇದನ್ನು ಬದಾಲಾಯಿಸಿ ಸೌಹಾರ್ದ ತರಲು ಬಿಜೆಪಿ ಅಭ್ಯರ್ಥಿ ಎ.ಎಸ್‌. ಪಾಟೀಲ (ನಡಹಳ್ಳಿ) ಅವರಿಗೆ ಬೆಂಬಲಿಸಿ ಮತ ನೀಡಬೇಕೆಂದು ವಿನಂತಿಸಿದರು.

Advertisement

ಬಿಜೆಪಿ ಮುಖಂಡ ಎಂ.ಎಸ್‌. ಪಾಟೀಲ (ನಾಲತವಾಡ) ಮಾತನಾಡಿ, 25 ವರ್ಷಗಳಿಂದ ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿರುವ ನಾಡಗೌಡರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಅತಿ ಹಿಂದುಳಿದ ಕ್ಷೇತ್ರ ಮುದ್ದೇಬಿಹಾಳ. ನಾಡಗೌಡರನ್ನು ಬದಲಿಸಲು ಒಂದು ಒಳ್ಳೆಯ ಅವಕಾಶ ಒದಗಿ ಬಂದಿದೆ. ಈ ಬಾರಿಗೆ ಬಿಜೆಪಿ ಅಭ್ಯರ್ಥಿ ಎ.ಎಸ್‌. ಪಾಟೀಲ (ನಡಹಳ್ಳಿ) ಅವರಿಗೆ ಬೆಂಬಲಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದರು. 

ವಿ.ಎ. ಹಜೇರಿ, ಎಸ್‌.ಪಿ. ಸರಶೆಟ್ಟಿ, ಎಸ್‌.ಎ. ಸರೂರ, ಮಹಾದೇವ ಕುಂಬಾರ, ಗಣ್ಯರಾದ ದತ್ತಾತ್ರೇಯ ಹೆಬಸೂರ, ಗೊಲ್ಲಾಳೆಪ್ಪ ಹಿರೇಗೌಡರ, ಚಿಂತಪ್ಪಗೌಡ ಯಾಳಗಿ, ಬಾಬು ಹಜೇರಿ, ವಾಸುದೇವ ಹೆಬಸೂರ, ಕೆ.ಎಂ. ಮಠ, ಮಲ್ಲು ದುಮಗುಂಡಿ, ಎಚ್‌.ಎಸ್‌.ಗೂಗಲ್ಲ, ವಿಶ್ವನಾಥ ಬಿದರಕುಂದಿ, ಪ್ರಭು ಬಿಳೇಭಾವಿ, ಯಂಕಣ್ಣ ಬಿಳೇಭಾವಿ, ಸುಭಾಷ್‌ ಗಾಣೂರ, ಚನಬಸು ದೇಸಾಯಿ, ಚನ್ನಬಸು ಸರಶೆಟ್ಟಿ, ಮುತ್ತು ಕಶೆಟ್ಟಿ, ಮಲ್ಲು ನಾಗರಾಳ, ನಾಗಪ್ಪ ಚುನಗುಡಿ ಇದ್ದರು. 

30ನೇ ವರ್ಷದಲ್ಲಿ ರಾಜಕೀಯ ಪ್ರವೇಶಿಸಿದ ನಾಡಗೌಡರಿಗೆ ಈಗ 60 ವರ್ಷವಾಗಿದೆ. 30 ವರ್ಷದ ರಾಜಕೀಯದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಲು ಅವರಿಂದ ಆಗಿಲ್ಲ. ಈ ಬಾರಿ ಅವರು ರಾಜಕೀಯವಾಗಿ ನಿವೃತ್ತಿ ಘೋಷಿಸಿಕೊಳ್ಳಬೇಕಿತ್ತು. ಅದನ್ನು ಅವರು ಮಾಡಲಿಲ್ಲ. ಅದಕ್ಕೆ ಈ ಬಾರಿ ಕ್ಷೇತ್ರದ ಜನತೆಯೇ ನಿವೃತ್ತಿಗೊಳಿಸಿ ಮನೆಗೆ ಕಳುಹಿಸಲು ಸಜ್ಜಾಗಿದ್ದಾರೆ.
 ಎ.ಎಸ್‌ .ಪಾಟೀಲ (ನಡಹಳ್ಳಿ) ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next