Advertisement

ಕಾಂಗ್ರೆಸ್‌ನಿಂದ ಸಹಾಯವಾಣಿ ಆರಂಭ

02:03 AM Apr 08, 2020 | Sriram |

ಬೆಂಗಳೂರು: ತೊಂದರೆಗೊಳಗಾಗಿ ವೈದ್ಯರು, ಔಷಧ ಸಿಗದೇ ಪರದಾಡುತ್ತಿರುವವರಿಗೆ ಕೆಪಿಸಿಸಿ ವೈದ್ಯಕೀಯ ನೆರವು ನೀಡಲು ಸಹಾಯ ವಾಣಿ ಆರಂಭಿಸಿದೆ.

Advertisement

ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೈದ್ಯಕೀಯ ವೃತ್ತಿ ಸಮಾಜಸೇವೆ. ನಿಸ್ವಾರ್ಥ ಮನೋಭಾವದಿಂದ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ರಾಜ್ಯಾದ್ಯಂತ ಲಾಕ್‌ಡೌನ್‌ ಆಗಿ 11 ದಿನಗಳಾಗಿವೆ. ಕಾಯಿಲೆಯಿಂದ ಬಳಲುವ ಅನೇಕರಿಗೆ ಆಸ್ಪತ್ರೆಗೆ ಹೋಗಲು ಕಷ್ಟವಾಗಿದೆ. ಇಂಥವರಿಗೆ ಕೆಪಿಸಿಸಿ ವೈದ್ಯಕೀಯ ಘಟಕ ನೆರವಾಗಲಿದೆ. ಈ ಸೇವೆ ಮಾಡಲು 75 ಮಂದಿ ವೈದ್ಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ. ಕೆಪಿಸಿಸಿಯಿಂದ ಕೋವಿಡ್ ನೆರವಿಗಾಗಿ 080-47188000 ದೂರವಾಣಿ ಸಂಖ್ಯೆಯ ಸಹಾಯವಾಣಿ ತೆರೆಯಲಾಗಿದ್ದು, ವೈದ್ಯರೇ ನಿರ್ವಹಿಸುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next