Advertisement

ಸಿಕ್ಖ್ ವಿರೋಧಿ ಹಿಂಸೆ : ವಿವಾದಿತ ಹೇಳಿಕೆಗೆ ಮುನ್ನ ಪಿತ್ರೋಡ ಸ್ವರ್ಣಮಂದಿರ ಭೇಟಿ

09:50 AM May 11, 2019 | Team Udayavani |

ಹೊಸದಿಲ್ಲಿ : ಕಾಂಗ್ರೆಸ್‌ ಹಿರಿಯ ನಾಯಕ ಸ್ಯಾಮ್‌ ಪಿತ್ರೋಡ ಅವರು 1984ರ ಸಿಕ್ಖ್ ವಿರೋಧಿ ಹಿಂಸೆಯ ಬಗ್ಗೆ “ಹುವಾ ತೋ ಹುವಾ’ ಎಂಬ ಭಾರೀ ವಿವಾದಾತ್ಮಕ ಹೇಳಿಕೆ ನೀಡುವ ಒಂದು ದಿನ ಮೊದಲು, ಮೇ 8ರಂದು ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿರುವು ವಿಷಯ ಹಲವರ ಹುಬ್ಬೇರಿಸಿದೆ.

Advertisement

ಪಿತ್ರೋಡ ಅವರು ತಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದಾಗ ತೆಗೆದ ಫೋಟೋಗಳನ್ನು ಟ್ವೀಟ್‌ ಮಾಡಿ “ಇದೊಂದು ದೈವಿಕ ಜೀವನಾವಧಿಯ ಅನುಭವ’ ಎಂದು ಹೇಳಿದ್ದಾರೆ.

“ಮೇ 8ರಂದು ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದೆ; ಇದೊಂದು ದೈವಿಕವಾದ ಜೀವನಾವಧಿಯ ಅನುಭವ; ಹಾಗೆಯೇ ಈ ಮಹೋನ್ನತ ಧರ್ಮದ ಇತಿಹಾಸವನ್ನು ತಿಳಿಯುವ ಒಂದು ಅವಕಾಶ’ ಎಂದು ಪಿಡ್ರೋಡ ಅವರು ಎರಡು ಟ್ವೀಟ್‌ಗಳಲ್ಲಿ ತಾವು ಅಪ್‌ಲೋಡ್‌ ಮಾಡಿರುವ ಫೋಟೋಗಳಿಗೆ ಕ್ಯಾಪ್ಶನ್‌ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next