Advertisement

‘ಬಕೆಟ್ ಯೋಗೇಶ್ವರ್’ : ಸಿಪಿ ಯೋಗೇಶ್ವರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

04:48 PM Jul 31, 2020 | keerthan |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿರುವ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.

Advertisement

ಬೆಂಗಳೂರಿನ ಕಾಂಗ್ರೆಸ್ ಭವನದ ಮುಂದೆ ಮುಖಂಡರಾದ ಮನೋಹರ್, ಸಲೀಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.  ಬಕೆಟ್ ಹಿಡಿದುಕೊಂಡು ಬಕೆಟ್ ಯೋಗೇಶ್ವರ್ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಧರಣಿಯಲ್ಲಿ ಮಾತನಾಡಿದ ಮನೋಹರ್, ಸಿಪಿ ಯೋಗೇಶ್ವರ್ ಮೆಗಾಸಿಟಿಯಲ್ಲಿ ಅವ್ಯವಹಾರ ಮಾಡಿದ ದ್ರೋಹಿ.  ಮೈತ್ರಿ ಸರ್ಕಾರವನ್ನು ಕೆಳಗಿಳಿಸಿದವರು. ಈಗ ಬಿಜೆಪಿ ಸರ್ಕಾರ ಇಳಿಸೋಕೆ ಪ್ರಯತ್ನ ಮಾಡ್ತಿದ್ದಾರೆ. ಇಂತಹ ನಯವಂಚಕ ಈಗ ನಮ್ಮ ನಾಯಕರ ವಿರುದ್ಧ ಮಾತನಾಡ್ತಾನೆ ಎಂದು ವಾಗ್ದಾಳಿ ನಡೆಸಿದರು.

ಇಂತಹವ ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಿಕೆ ಕೊಡ್ತಾನೆ. ಇಂತವನ ಪರ ನಳೀನ್ ಕುಮಾರ್ ಕಟೀಲ್ ಸಮರ್ಥಿಸಿಕೊಳ್ತಾರೆ. ನಳೀನ್ ಕಟೀಲು ಗ್ರಾಮಪಂಚಾಯತಿ ಸದಸ್ಯನಾಗಲೂ ನಾಲಾಯಕ್, ಇಂತವನನ್ನ ಬಿಜೆಪಿ ಇಟ್ಟುಕೊಂಡಿರುವುದು ದುರದೃಷ್ಟ ಎಂದು ಮನೋಹರ್ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next