Advertisement

ಪ್ರತಾಪ್‌ ಸಿಂಹ ವಿರುದ್ದ ಕಾಂಗ್ರೆಸ್‌ ಆಕ್ರೋಶ

11:35 AM Nov 21, 2021 | Team Udayavani |

ಶಹಾಬಾದ: ಮಾಜಿ ಸಚಿವ, ಹಾಲಿ ಶಾಸಕ ಹಾಗೂ ಕಾಂಗ್ರೆಸ್‌ ಪಕ್ಷದ ವಕ್ತಾರ ಪ್ರಿಯಾಂಕ್‌ ಖರ್ಗೆ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಶನಿವಾರ ನಗರದ ನೆಹರು ವೃತ್ತದಲ್ಲಿ ಪ್ರಿಯಾಂಕ್‌ ಖರ್ಗೆ ಅಭಿಮಾನಿಗಳು ಮತ್ತು ಕಾಂಗ್ರೆಸ್‌ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿ ಸಂಸದ ಪ್ರತಾಪ ಸಿಂಹ ಪ್ರತಿಕೃತಿ ದಹಿಸಿದರು.

Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಶೀದ್‌ ಮರ್ಚಂಟ್‌ ಮಾತನಾಡಿ, ಬಹುದೊಡ್ಡ ಹಗರಣವಾಗಿರುವ ಬಿಟ್‌ ಕಾಯಿನ್‌ ಬಗ್ಗೆ ಧ್ವನಿ ಎತ್ತಿದ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಸಂಸದ ಪ್ರತಾಪ್‌ ಸಿಂಹ ವೈಯಕ್ತಿಕವಾಗಿ ಹೇಳಿಕೆ ನೀಡಿದ್ದು ಖಂಡನೀಯ. ಇಂತಹ ಹಗುರ ಮಾತನಾಡಿರುವುದು ಅವರ ನೈತಿಕತೆ ಎತ್ತಿ ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ವಿಜಯಕುಮಾರ ಮುಟ್ಟತ್ತಿ, ಯಾಕೂಬ ಮರ್ಚಂಟ, ಗಿರೀಶ ಕಂಬಾನೂರ, ಕುಮಾರ ಚವ್ಹಾಣ, ಡಾ| ಅಹ್ಮದ್‌ ಪಟೇಲ್‌, ಇನಾಯತ್‌ ಖಾನ್‌ ಜಮಾದಾರ, ಸೂರ್ಯಕಾಂತ ಕೋಬಾಳ, ಯುವ ಕಾಂಗ್ರೆಸ್‌ ಅಧ್ಯಕ್ಷ ಕಿರಣ ಚವ್ಹಾಣ, ರವಿ ಚವ್ಹಾಣ, ತಿಪ್ಪಣ್ಣ ನಾಟೀಕಾರ, ಶರಣು ಪಗಲಾಪುರ, ನಾಗಣ್ಣ ರಾಂಪೂರೆ, ಮಹ್ಮದ್‌ ಜಾವೀದ್‌, ಫಜಲ್‌ ಪಟೇಲ್‌, ಮೆರಾಜ ಸಾಹೇಬ್‌, ಮಹ್ಮದ್‌ ಇಮ್ರಾನ್‌, ಮಹ್ಮದ್‌ ಅಜರ್‌, ಮೆಹಬೂಬ, ರಾಜೇಶ ಯನಗುಂಟಿಕರ್‌, ಶಿವರಾಜ ಕೋರೆ, ಶಿವಕುಮಾರ ನಾಟೇಕಾರ, ಸ್ನೇಹಲ್‌ ಜಾಯಿ, ರಾಜು ಮೇಸ್ತ್ರಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next