Advertisement

Congress ಶ್ರೀ ರಾಮ, ಅಯೋಧ್ಯೆಯನ್ನು ಬಹಿಷ್ಕರಿಸುತ್ತಿಲ್ಲ: ವೀರಪ್ಪ ಮೊಯ್ಲಿ

04:36 PM Jan 12, 2024 | |

ಬೆಂಗಳೂರು: ನಾವು ಶ್ರೀ ರಾಮ ದೇವರು ಮತ್ತು ಅಯೋಧ್ಯೆಯನ್ನು ಬಹಿಷ್ಕರಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿರುವ ಬಗ್ಗೆ ಮಾಜಿ ಕೇಂದ್ರ ಸಚಿವ ಪ್ರತಿಕ್ರಿಯೆ ನೀಡಿ, “ನಾವು ರಾಮ, ಅಯೋಧ್ಯೆಯನ್ನು ಬಹಿಷ್ಕರಿಸುತ್ತಿಲ್ಲ, ‘ರಾಜಧರ್ಮ’ವನ್ನು ಅನುಸರಿಸದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ನಾವು ಬಹಿಷ್ಕರಿಸುತ್ತೇವೆ” ಎಂದಿದ್ದಾರೆ.

ಬಿಜೆಪಿಯವರು ತಮ್ಮ ಚುನಾವಣ ಉದ್ದೇಶವನ್ನು ಸಾಧಿಸಲು ಈ ಕಾರ್ಯಕ್ರಮವನ್ನು ರಾಜಕೀಯ ಘಟನೆಯಾಗಿ ಪರಿವರ್ತಿಸಲು ಬಯಸುತ್ತಾರೆ. ಹಾಗಾಗಿ ನಮ್ಮ ಚುನಾವಣೆಯ ಉದ್ದೇಶ ಅಲ್ಲಿಗೆ ಹೋಗುವುದರಿಂದ ಈಡೇರುವುದಿಲ್ಲ”ಎಂದು ಎಎನ್ ಐ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next