Advertisement

Crime: ಕಾಂಗ್ರೆಸ್‌ ಪುರಸಭೆ ಸದಸ್ಯನ ಭೀಕರ ಹತ್ಯೆ; ಆನೇಕಲ್‌ನಲ್ಲಿ ಉದ್ವಿಗ್ನ ಸ್ಥಿತಿ

10:03 AM Jul 25, 2024 | Team Udayavani |

ಆನೇಕಲ್‌: ಹಳೇ ವೈಷಮ್ಯದ ಹಿನ್ನೆಯಲ್ಲಿ ಪುರಸಭಾ ಸದಸ್ಯನನ್ನು ಮಾರಾ ಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಆನೇಕಲ್‌ ಪಟ್ಟಣದಲ್ಲಿ  ನಡೆದಿದೆ.

Advertisement

ಘಟನೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ರವಿ ಆಲಿಯಾಸ್‌ ಸ್ಕ್ರ್ಯಾ ಪ್‌ ರವಿ (38) ಕೊಲೆಯಾದ ವ್ಯಕ್ತಿ. ರವಿ ಸದ್ಯ ಆನೇಕಲ್‌ ಪುರಸಭೆಯ 22ನೇ

ವಾರ್ಡ್‌ನ ಕಾಂಗ್ರೆಸ್‌ ಸದಸ್ಯ. ಬುಧವಾರ ರಾತ್ರಿ ರವಿ ಮನೆಯಲ್ಲಿದ್ದಾಗ ಮಾತನಾ ಡುವ ನೆಪದಲ್ಲಿ ಕೆಲವರು ರವಿಯನ್ನು  ಮನೆಯಿಂದ ಹೊರಗಡೆ ಕರೆದೊಯ್ದು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿದ್ದ ರವಿಯನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿಲ್ಲ.  ಸಿಸಿಟಿವಿ ದೃಶ್ಯದಲ್ಲಿ ಕಂಡು ಬಂದಿರುವ ಆರೋಪಿಗಳ ಪತ್ತೆಗೆ  ಆನೇಕಲ್‌ ಪೊಲೀಸರು ಬೆಲೆ ಬೀಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next