Advertisement

Congress ಶಾಸಕರು ಯಾರು ಬಿಜೆಪಿಗೆ ಹೋಗಲ್ಲ: ಸಚಿವ ಮಧು ಬಂಗಾರಪ್ಪ

07:11 PM Oct 28, 2023 | Shreeram Nayak |

ಶಿವಮೊಗ್ಗ: ಬಿಜೆಪಿಯವರ “ಆಪರೇಷನ್‌ ಕಮಲ’ ಫ್ಲಾಪ್‌ ಆಗುತ್ತದೆ. ಸಕ್ಸಸ್‌ ಆಗಲ್ಲ. ಆಪರೇಷನ್‌ಗೆ ಯತ್ನಿಸಿ ಪ್ರಜಾಪ್ರಭುತ್ವವನ್ನು ಹಾಳು ಮಾಡಬೇಡಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ವಿರುದ್ಧವಾಗಿ ಹೋಗೋದು ಯಾವಾಗಲೂ ಸಕ್ಸಸ್‌ ಆಗಲ್ಲ. ನಮ್ಮ ಸರ್ಕಾರ ಇರಬೇಕಾದರೆ ಇದೆಲ್ಲ ಆಗಲ್ಲ. ಬಿಜೆಪಿಗೆ ಹೋಗುವಂಥ ಶಾಸಕರ್ಯಾರೂ ಕಾಂಗ್ರೆಸ್‌ನಲ್ಲಿ ಇಲ್ಲ ಎಂದರು.

ಡಿಕೆಶಿ ಸಿಎಂ ಆಗುತ್ತಾರೆ ಎಂದು ಶಾಸಕ ರವಿ ತಮ್ಮ ವೈಯಕ್ತಿಕ ಭಾವನೆಯನ್ನು ಹೇಳಿದ್ದಾರೆ. ಇಂತಹ ವಿಚಾರ ಸಾರ್ವಜನಿಕವಾಗಿ ಚರ್ಚೆ ಮಾಡಲ್ಲ. ನಮ್ಮ ಪಕ್ಷದಲ್ಲಿ ಹೈಕಮಾಂಡ್‌ ಸಿಸ್ಟಮ್‌ ಇದೆ. ಈಗಿನ ನಿರ್ಧಾರ ಕೂಡ ಹೈಕಮಾಂಡ್‌ ಮಾಡಿರೋದು. ಅದಕ್ಕೆ ನಾವೆಲ್ಲರೂ ಗೌರವ ಕೊಡಬೇಕು. ಮಾತಾಡುವಾಗ ಯೋಚಿಸಬೇಕು. ವೈಯಕ್ತಿಕ ಹೇಳಿಕೆಗೆ ಅವರೇ ಉತ್ತರ ಕೊಡಬೇಕು ಎಂದರು.

ಶಾಲೆಗಳ ಎಸ್‌ಡಿಎಂಸಿಗಳಲ್ಲಿ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಲೆಗೆ ಎಸ್‌ಡಿಎಂಸಿ ಇರಲೇಬೇಕು. ಸಮಿತಿ ರಾಜಕೀಯವಾಗಿ ಬಳಸಿದರೆ ಇಲಾಖೆಯಿಂದ ಸ್ಪಷ್ಟ ಕ್ರಮ ಆಗುತ್ತದೆ. ಒಂದೆರಡು ಸ್ಕೂಲ್‌ ಆಗಿದ್ರೆ ಪರಿಶೀಲನೆ ಮಾಡುತ್ತೇವೆ. ಸಮಿತಿ ಶಾಲೆಗೆ ಸೀಮಿತ. ರಾಜಕೀಯ ಪಕ್ಷ ಅಥವಾ ಸರ್ಕಾರಕ್ಕೆ ಅಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next