Advertisement

ಆಸ್ಪತ್ರೆ ಹೊಂದಿರುವ ಕಾಂಗ್ರೆಸ್ ನಾಯಕರು 100 ಬೆಡ್ ವ್ಯವಸ್ಥೆ ಮಾಡಿ : ಜಿ ಸಿ ಚಂದ್ರಶೇಖರ್

02:56 PM Apr 27, 2021 | Team Udayavani |

ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಯಾರ ಬಳಿ ಮೆಡಿಕಲ್ ಕಾಲೇಜು ಇದೆಯೋ ಅವರು 100 ಬೆಡ್ ಗಳ ವ್ಯವಸ್ಥೆ ಮಾಡಬೇಕು. ಲಾಕ್ ಡೌನ್ ನಿಂದ ಜನರಿಗೆ ಸಮಸ್ಯೆ ಆಗಿದೆ. ಪ್ರತಿಯೊಬ್ಬರಿಗೂ 10 ಅಕ್ಕಿ ಕೆಜಿ ಕೊಡುವಂತೆ ಒತ್ತಡ ಮಾಡಬೇಕು ಎಂದು ಮಂಗಳವಾರ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್ ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ.

Advertisement

ಹೆಲ್ ವರ್ಕರ್ಸ್ ಗೆ 50 ಲಕ್ಷ ಲೈಫ್ ಇನ್ಶುರೆನ್ಸ್ ಇತ್ತು. ಅದನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಇದನ್ನು ಮತ್ತೆ ಪ್ರಾರಂಭ ಮಾಡಲು ಹೇಳಬೇಕು. ಪಕ್ಷದಲ್ಲಿ ಸುಮ್ಮನೆ ಹೆಸರಿಗೋಸ್ಕರ ವಾರ್ ರೂಮ್ ಓಪನ್ ಮಾಡಬಾರದು.  ಜಿಲ್ಲೆಯಿಂದ ಬರುವ ಎಲ್ಲಾ ಕಾಲ್ ಅಟೆಂಡ್ ಮಾಡಬೇಕು ಎಂದು ಅವರು ತಿಳಿಸಿದರು.

ಜಿಲ್ಲೆಗಳಿಂದ ಬರುವ ವಿಡಿಯೋಗಳನ್ನು ಮೀಡಿಯಾದಲ್ಲಿ ಬರುವಂತೆ ಮಾಡಬೇಕು. ಖಾಸಗಿಯವರು 1000 ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಟೆಸ್ಟಿಂಗ್ ಲ್ಯಾಬ್ ನಲ್ಲಿ 500 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದ ಖಾಸಗಿ ಆಸ್ಪತ್ರೆಗಳು ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದರು.

ಕೋವಿಡ್ ನಿಂದ ಸಾಯುವವರ ಸರಿಯಾದ ಸಂಖ್ಯೆ ಕೊಡುತ್ತಿಲ್ಲ. ಪ್ರತಿ ಜಿಲ್ಲೆಯಲ್ಲಿ ನಮ್ಮ ನಾಯಕರುಗಳು ಇದ್ದಾರೆ. ಅವರುಗಳು ಅಲ್ಲಿಯ ವಾಸ್ತವ ಅಂಶ ಬರುವಂತೆ ಮಾಡಬೇಕು ಎಂದು ಜಿ ಸಿ ಚಂದ್ರಶೇಖರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next