Advertisement

Congress ನಾಯಕರ ಹೇಳಿಕೆಗಳು ನನಗೆ ಸಂತೋಷ ತಂದಿವೆ: ಸೂಲಿಬೆಲೆ

07:23 PM Jun 23, 2023 | Team Udayavani |

ರಬಕವಿ-ಬನಹಟ್ಟಿ: ಹಿಂದೂ ಕಾರ್ಯಕರ್ತನಾಗಿ ನಾನೊಬ್ಬ ಸಾಮಾನ್ಯ ಪ್ರಜೆಯಾಗಿದ್ದೇನೆ. ಯಾವುದೇ ಆರೋಪಗಳಿಗೆ ಕಿವಿಗೋಡುವುದಿಲ್ಲ, ಅದರ ಅವಶ್ಯಕತೆಯೂ ನಂಗೆ ಇಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಕಾಂಗ್ರೆಸ್ ಪಕ್ಷಕ್ಕೆ ತೀಕ್ಷ್ಣವಾಗಿ ತಿರಗೇಟು ನೀಡಿದ್ದಾರೆ.

Advertisement

ಶುಕ್ರವಾರ ಬನಹಟ್ಟಿಯ ಸುರೇಶ ಚಿಂಡಕ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರುಗಳ ಹೇಳಿಕೆಗಳು ನನಗೆ ಸಂತೋಷ ತಂದಿವೆ. ಕಾನೂನು ಎಲ್ಲರಿಗೂ ಒಂದೇ. ಅದರಡಿಯಲ್ಲಿ ಕೆಲಸ ಮಾಡಲು ಹೆದರಿಕೆಯೇಕೆ ಎಂದು ಪ್ರಶ್ನಿಸಿದರು.

ಜೈಲಿಗಟ್ಟುತ್ತೇವೆ. ನಿಷೇಧಿಸುತ್ತೇವೆ ಅನ್ನುವ ಕಾಂಗ್ರೆಸ್‌ನವರ ಪದಗಳು ನನಗೆ ಸಂತೋಷ ತಂದಿದೆ ಎಂದರು.

ಪಠ್ಯ ಪುಸ್ತಕ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರ ಸೇರಿ ಹಲವು ವಿಚಾರಗಳ ಕುರಿತು ಸಚಿವರಾದ ಎಂ.ಬಿ.ಪಾಟೀಲ್,ಪ್ರಿಯಾಂಕ್ ಖರ್ಗೆ ಸೇರಿ ಹಲವು ಕಾಂಗ್ರೆಸ್ ಮುಖಂಡರು ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next