Advertisement

ವೇಣು ಎದುರೇ ಕಾಂಗ್ರೆಸ್‌ ಮುಖಂಡರ ವಾಕ್ಸಮರ 

11:06 AM Oct 18, 2017 | Team Udayavani |

ಚಿತ್ರದುರ್ಗ: ನಗರದ ವೀರಸೌಧದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಎದುರೇ ಪಕ್ಷದ ಇಬ್ಬರು ಮುಖಂಡರು ವಾಕ್ಸಮರ ನಡೆಸಿದ ಘಟನೆ ಸಂಭವಿಸಿತು. ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿ ಕಾರ ಅಧ್ಯಕ್ಷ ಆರ್‌.ಕೆ. ಸರ್ದಾರ್‌ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್‌. ಮಂಜುನಾಥ್‌ ಪರಸ್ಪರ ಮಾತಿನ ಚಕಮಕಿ ನಡೆಸಿದರು.

Advertisement

ವೇಣುಗೋಪಾಲ್‌ ಭಾಷಣ ಮಾಡುತ್ತಿದ್ದಾಗ ಅವರ ಹಿಂದೆ ಸರ್ದಾರ್‌ ನಿಂತುಕೊಂಡಿದ್ದರು. ಈ ಸಂದರ್ಭ ಸರ್ದಾರ್‌, ಅಲ್ಲಿದ್ದವರೊಂದಿಗೆ ಮಾತನಾಡು ತ್ತಿದ್ದರು. ಇದರಿಂದ ವೇಣುಗೋಪಾಲ್‌ ಅವರಿಗೆ ಕಿರಿಕಿರಿ ಉಂಟಾದರೂ ಏನೂ ಹೇಳದೆ ಭಾಷಣ ಮುಂದುವರಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್‌. ಮಂಜುನಾಥ್‌  ಸುಮ್ಮನಿರುವಂತೆ ಸರ್ದಾರ್‌ಗೆ ಸೂಚಿಸಿದರು. ಇದರಿಂದ ಕೆರಳಿದ ಆರ್‌.ಕೆ. ಸರ್ದಾರ್‌, ಮಂಜುನಾಥ್‌ ಅವರೊಂದಿಗೆ ವಾಗ್ವಾದ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next