Advertisement

ವಿಶೇಷ ಸ್ಥಾನಮಾನ ಹಿಂತೆಗತಕ್ಕೆ ಕಳವಳ : ಅಳ್ವಿ ಹೇಳಿಕೆ ತಳ್ಳಿಹಾಕಿದ ಶತ್ರುಘ್ನ ಸಿನ್ಹಾ

10:00 AM Feb 25, 2020 | Hari Prasad |

ಪಾಟ್ನಾ: ‘ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಗ್ಗೆ ಕಾಂಗ್ರೆಸ್‌ ನಾಯಕ ಶತ್ರುಘ್ನ ಸಿನ್ಹಾ ನನ್ನ ಬಳಿ ಕಳವಳ ವ್ಯಕ್ತಪಡಿಸಿದ್ದರು’ ಎಂಬ ಪಾಕಿಸ್ತಾನದ ಅಧ್ಯಕ್ಷ ರಶೀದ್‌ ಅಳ್ವಿ ಅವರ ಹೇಳಿಕೆಯನ್ನು ಸಿನ್ಹಾ ತಳ್ಳಿಹಾಕಿದ್ದಾರೆ.

Advertisement

ರಶೀದ್‌ ಅಳ್ವಿ ಅವರ ಕುಟುಂಬದೊಂದಿಗೆ ನನಗೆ ಆತ್ಮೀಯತೆ ಇದೆ. ಹೀಗಾಗಿ ಅಳ್ವಿ ಅವರ ಪುತ್ರನ ವಿವಾಹದಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಹೋಗಿದ್ದೆ. ಆಗ ನಾವು ಕೆಲವು ವೈಯಕ್ತಿಕ ಹಾಗೂ ಸಾಮಾಜಿಕ ವಿಷಯಗಳ ಕುರಿತು ಮಾತನಾಡಿದ್ದೇವೆಯೇ ಹೊರತು ರಾಜಕೀಯ ಕುರಿತಂತೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಶತ್ರುಘ್ನ ಸಿನ್ಹಾ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next