Advertisement

ಕಾಂಗ್ರೆಸ್‌ ಭೂಕಳ್ಳತನ ಬಯಲು

06:45 AM Dec 23, 2018 | |

ಹೊಸದಿಲ್ಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಹೆರಾಲ್ಡ್‌ ಹೌಸ್‌ ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್‌ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ತೀವ್ರ ವಾಗ್ಧಾಳಿ ನಡೆಸಿದೆ. 

Advertisement

ನೆಹರು ಕುಟುಂಬ ಭೂಕಳ್ಳತನ ಮಾಡುತ್ತಿರುವುದು ಈ ಪ್ರಕರಣದಿಂದ ಬಯಲಾಗಿದೆ ಎಂದು ಕಾನೂನು ಸಚಿವ ರವಿಶಂಕರ ಪ್ರಸಾದ್‌ ಆರೋಪಿಸಿದ್ದಾರೆ. ದಶಕಗಳಿಂದಲೂ ರಾಹುಲ್‌, ಸೋನಿಯಾ ಹಾಗೂ ಕುಟುಂಬದವರು ಸಾರ್ವಜನಿಕ ಆಸ್ತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. 5 ಸಾವಿರ ಕೋಟಿ ರೂ. ಮೌಲ್ಯದ ಸ್ವತ್ತನ್ನು ಕೇವಲ 50 ಲಕ್ಷ ರೂ.ಗೆ ಯಂಗ್‌ ಇಂಡಿಯಾಗೆ ಮಾರಾಟ ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿ ಕರಿಗೆ ರಾಹುಲ್‌ ಗಾಂಧಿ ವಿವರಣೆ ನೀಡಬೇಕು ಎಂದಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next