Advertisement

“ಕಾಂಗ್ರೆಸ್‌ ಹತಾಶವಲ್ಲ; ಬಿಜೆಪಿ ಹಗಲುಗನಸು’

12:50 AM Mar 23, 2019 | Team Udayavani |

ಉಡುಪಿ: ಕಾಂಗ್ರೆಸ್‌ ಹತಾಶ ವಾಗಿಲ್ಲ, ಬಿಜೆಪಿ ಗೆಲುವಿನ ಹಗಲುಗನಸು ಕಾಣುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಅವಧಿಗಳಲ್ಲಿ ಜಿಲ್ಲೆಯಲ್ಲಿ ಆದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲು ಸದಾ ಸಿದ್ಧ.  ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆಯವರ ಕೊಡುಗೆ ಬಗ್ಗೆ ಜನರಿಗೆ ಗೊತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಹೇಳಿದೆ. 

Advertisement

ಕಾರ್ಯಕರ್ತರಿಂದ ಗೋಬ್ಯಾಕ್‌ ಶೋಭಾ ಅಭಿಯಾನ ನಡೆಸಿದ ಬಿಜೆಪಿ ಮುಖಂಡರ ಪ್ರಯತ್ನ ಪಕ್ಷದ ಒಳಗೆ ಏನನ್ನು ಬಿಂಬಿಸುತ್ತದೆ? ಅಭ್ಯರ್ಥಿ ಬಗ್ಗೆ ಇಷ್ಟೆಲ್ಲ ವಿರೋಧ ವ್ಯಕ್ತವಾದರೂ ಶೋಭಾ ಸ್ಪರ್ಧಿಸಲು ಅವಕಾಶ ಪಡೆದಿರುವುದು ಕಾರ್ಯಕರ್ತರಲ್ಲಿ ಹತಾಶೆ ಮೂಡಿಸಿದೆ ಎಂದಿರುವ ಜಿಲ್ಲಾ ಪ್ರ. ಕಾರ್ಯದರ್ಶಿ ಬಿ. ನರಸಿಂಹಮೂರ್ತಿ ಹಾಗೂ ವಕ್ತಾರ ಭಾಸ್ಕರ್‌ ರಾವ್‌, ಮೈತ್ರಿಧರ್ಮದಂತೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್‌, ಜೆಡಿಎಸ್‌ಗೆ ನೀಡಿದೆ.  ಹೀಗಿರುವಾಗ ಜಿಲ್ಲೆ ಕಾಂಗ್ರೆಸ್‌ ಮುಕ್ತ ಎನ್ನುವ ಬಿಜೆಪಿ ಹೇಳಿಕೆ ಹಾಸ್ಯಾಸ್ಪದ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next