Advertisement

ಕಾಂಗ್ರೆಸ್‌ನದ್ದು ಭ್ರಷ್ಟ ಸರ್ಕಾರ; ಡಿವಿಎಸ್‌ ಮೂದಲಿಕೆ

12:10 PM Aug 23, 2017 | Team Udayavani |

ಕೆಂಗೇರಿ: “ಕಾಂಗ್ರೆಸ್‌ ಸರ್ಕಾರದ ಪಾಪದ ಕೊಡ ತುಂಬಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲ ಕಚ್ಚಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ,’ ಹೀಗೆಂದು ಭವಿಷ್ಯ ನುಡಿದವರು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಾವರೆಕೆರೆಯ ಅಂಜನಾದ್ರಿ ಕಲ್ಯಾಣ ಮಂಟಪದಲ್ಲಿ ಯಶವಂತಪುರ ಕ್ಷೇತ್ರ ಬಿಜೆಪಿಯ ಮತಗಟ್ಟೆ ಸಮಿತಿ ಸದಸ್ಯರ ಸಮಾವೇಶದಲ್ಲಿ ಮಾತನಾಡಿದರು.

Advertisement

“ಸಿದ್ದರಾಮಯ್ಯ ರಾಜಕೀಯ ದ್ವೇಷದಿಂದ ಪಕ್ಷದ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಪ್ರಕರಣಗಳನ್ನು  ದಾಖಲಿಸುವ ಮೂಲಕ ನೀಚ ರಾಜಕಾರಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಪಾಪದ ಕೊಡ ತುಂಬಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲ ಕಚ್ಚಲಿದೆ. ಬಿಜೆಪಿ  ಮತ್ತೆ ಅಧಿಕಾರಕ್ಕೆ ಬರಲಿದೆ,’ ಎಂದರು.

“ಸಚಿವ ಡಿ.ಕೆ.ಶಿವಕುಮಾರ್‌ ಮನೆ ಮೇಲೆ ನಡೆದ ಐಟಿಯಲ್ಲಿ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ,  ಐಟಿ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕಪ್ಪುಹಣ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಈ ದಾಳಿ ನಡೆದಿದೆ. ದೇಶದ ಆರ್ಥಿಕ ಶಿಸ್ತು, ಪಾರದರ್ಶಕ  ಆಡಳಿತವನ್ನು ಪಾಶ್ಚಾತ್ಯ ದೇಶಗಳೂ ಮೆಚ್ಚಿವೆ,’ ಎಂದೂ ಹೇಳಿದರು. 

ಲೋಕಸಭೆ ಸದಸ್ಯೆ ಶೋಭಾ ಕರಂದ್ಲಾಜೆ ಮಾತನಾಡಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೇ ನಾನೇ ಆಭ್ಯರ್ಥಿಯಾಗುತ್ತೇನೊ ಅಥವಾ ಬೇರೆಯವರು ಆಗುತ್ತಾರೊ. ಅದು ಮುಖ್ಯವಲ್ಲ. ವರಿಷ್ಠರು ಯಾರಿಗೇ ಟಿಕೆಟ್‌ ನೀಡಿದರೂ ಚುನಾ ವಣೆಯಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ.

ಕ್ಷೇತ್ರವ್ಯಾಪ್ತಿಯಲ್ಲಿ 5 ಘನ ತ್ಯಾಜ್ಯ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಮೂಲಕ ಶಾಸಕಸೋಮಶೇಖರ್‌ ಗ್ರಾಮ ಗಳ ಜನರನ್ನು ಅನಾರೋಗ್ಯ ಪೀಡಿತರನ್ನಾಗಿ ಮಾಡುತ್ತಿದ್ದಾರೆ. ಬಿಜೆಪಿ  ಅಧಿಕಾರಕ್ಕೆ ಬಂದರೆ ಐದೂ ಘಟಕಗಳನ್ನು ವೈಜಾnನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು,’ ಎಂದು ಭರವಸೆ ನೀಡಿದರು.

Advertisement

ಕ್ಷೇತ್ರ ಬಿಜೆಪಿ ಅಧ್ಯಕ್ಷ ಮಾರೇಗೌಡ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರಾಜು, ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ರುದ್ರೇಶ್‌, ಉಪಾಧ್ಯಕ್ಷ ರ.ಅಂಜಿನಪ್ಪ, ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ್‌, ಪುರಸಭಾ ಮಾಜಿ  ಉಪಾಧ್ಯಕ್ಷ ಜಿ.ಮುನಿರಾಜು ಹಾಗೂ ಕಾರ್ಯಕರ್ತ ಮುಖಂಡರುಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next