Advertisement

Congress: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಕಾಂಗ್ರೆಸ್‌ ಉಸ್ತುವಾರಿ ನೇಮಕ

11:29 PM Jan 26, 2024 | Pranav MS |

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಬೂತ್‌ಮಟ್ಟದ ಏಜೆಂಟ್‌ಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಹಾಗೂ ಕೆಪಿಸಿಸಿ, ಜಿಲ್ಲಾ, ಬ್ಲಾಕ್‌ ಮುಖಂಡರ ಜತೆ ಸಮನ್ವಯ ಸಾಧಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್‌ ಬಿ.ಎಲ್‌.ಎ. ಸಮನ್ವಯ ಸಮಿತಿ ಮತ್ತು ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್‌ ಅವರನ್ನು ಕೆಪಿಸಿಸಿ ಸಂವಹನ-ಬಿಎಲ್‌ಎ ಕಾರ್ಯಕ್ರಮದ ಅಧ್ಯಕ್ಷರನ್ನಾಗಿ, ಕೆಪಿಸಿಸಿ ಉಪಾಧ್ಯಕ್ಷ ರಾದ ಪಿ.ಆರ್‌. ರಮೇಶ್‌-ಬೆಂಗಳೂರು ವಿಭಾಗ, ಶರಣಪ್ಪ ಮಟ್ಟೂರು-ಗುಲ್ಬರ್ಗಾ ವಿಭಾಗ, ವೀರ ಕುಮಾರ್‌ ಪಾಟೀಲ್‌-ಬೆಳಗಾವಿ ವಿಭಾಗ, ಐವನ್‌ ಡಿ’ಸೋಜಾ- ಮೈಸೂರು ವಿಭಾಗದ ಉಸ್ತುವಾರಿ ಗಳಾಗಿರಲಿದ್ದಾರೆ. ಬಲದೇವಕೃಷ್ಣ ಸಂಚಾಲಕರಾಗಿರುತ್ತಾರೆ.

Advertisement

ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದ್ದು, ಅದರಂತೆ ದಕ್ಷಿಣ ಕನ್ನಡ-ಭರತ್‌ ಮುಂಡೋಡಿ, ಉಡುಪಿ-ವೆರೋನಿಕ ಕೆರ್ನೇಲಿಯೋ, ಕೊಡಗು-ಸರಿತಾ ಪೂಣಚ್ಚ, ಉತ್ತರ ಕನ್ನಡ-ರಾಮಚಂದ್ರ ನಾಯಕ್‌ ಅವರನ್ನು ನೇಮಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next